
ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸೂಗೂರು : ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ನಡೆಯಲಿದ್ದು,
ಅಭ್ಯರ್ಥಿಗಳ ಹೃದಯ ಬಡಿತ ಹೆಚ್ಚಿದೆ ನಗರದಲ್ಲಿ ಬೆಳಗಿನ ಜಾವ ಸಮಯದಲ್ಲಿ ಮತ ಏಣಿಕಿಯ ಕೆಂದ್ರದ ಕಡೆ ಅಭ್ಯರ್ಥಿಗಳ ಜತೆಗೆ ಅವರ ಬೆಂಬಲಿಗರು ಹಾಗೂ ಪಕ್ಷದ ಮುಖಂಡರಲ್ಲೂ ಫಲಿತಾಂಶದ ತಿಳಿಯಲು
ಕೊರೆಯುವ ಚಳಿ ಯಲ್ಲಿ ಮತ ಏಣಿಯ ಕೆಂದ್ರ ಕಡೆ ಮುಖ ಮಾಡಿದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನತ್ತ ಆಗಮಿಸಿದ್ದಾರೆ.ಚುನಾವಣೆ ಆಯೋಗದ ಅಧಿಕಾರಿಗಳು ಹಾಗೂ ಮತ ಎಣಿಕೆ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು, ಏಜೆಂಟರಿಗೆ ಕಡ್ಡಾಯವಾಗಿ ಗುರುತಿನ ಚೀಟಿ ತರಲು ಸೂಚಿಸಲಾಗಿದೆ.
Video Player
00:00
00:00
ಗುರುತಿನ ಚೀಟಿ ಇಲ್ಲದ ಅನಧಿಕೃತ ವ್ಯಕ್ತಿಗಳಿಗೆ ಕೇಂದ್ರಕ್ಕೆ ಪ್ರವೇಶ ನೀಡದಂತೆ ಪೊಲೀಸರ ಖಡಕ್ ಸೂಚನೆ ಕೊಟ್ಟರು. ಮತ ಎಣಿಕೆ ಕೇಂದ್ರಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ, ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.