ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಮೊಹರಂ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆಗಳಿಗೆ ಯಾರೇ ಆಗಲಿ ಕಾರಣರಾದವರನ್ನು ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ಧಾಕ್ಷಿಣ್ಯಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಯಶವಂತ ಬಿಸನಹಳ್ಳಿ ಹೇಳಿದರು ಅವರು ಪಟ್ಟಣದ ಠಾಣೆಯಲ್ಲಿ ನಡೆದ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬವನ್ನು ಸರ್ವರೂ ಶಾಂತಿ ಸೌಹಾರ್ದತೆಯಿಂದ ಆಚರಿಸಿ ಕಾನೂನು ಚೌಕಟ್ಟಿನಲ್ಲಿ ಪೊಲೀಸರ ಜೊತೆಗೆ ಸಾರ್ವಜನಿಕರು ಕೂಡ ಕೈಜೋಡಿಸಿದಲ್ಲಿ ಹಬ್ಬವು ವಿಜೃಂಭಣೆಯಿಂದ ನಡೆಯುತ್ತದೆ ಆದ್ದರಿಂದ ಶಾಂತಿ ಕಾಪಾಡುವುದರ ಜೊತೆಗೆ ಸೌಹಾರ್ದತೆಯನ್ನು ಕೂಡ ಮೈಗೂಡಿಸಿಕೊಂಡು ಎಲ್ಲಾ ಸಮಾಜದವರು ಒಗ್ಗೂಡಿ ಹಬ್ಬವನ್ನು ಆಚರಿಸಲು ಕರೆ ನೀಡಿದರು.
ನಂತರ ಸ್ಥಳೀಯ ಠಾಣಾಧಿಕಾರಿ ಚಂದ್ರಪ್ಪ ಎಚ್ ಮಾತನಾಡಿ ಶಾಂತಿಯುತವಾಗಿ ಹಬ್ಬ ಆಚರಿಸಲು ಸರ್ವರೂ ಸಹಕಾರ ನೀಡುವುದರ ಜೊತೆಗೆ ಸಮಯ ಪಾಲನೆ ಮಾಡು
ಯಾವುದೇ ಅಹಿತಕರ ಘಟನೆಗಳು ನಡೆದಂತೆ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ನಂತರ ಮುಖಂಡರಾದ ಬಸನಗೌಡ ಮಾಲಿಪಾಟೀಲ್, ಚಂದ್ರಶೇಖರ್ ನಾಲತವಾಡ, ಗೇಸುದ್ದೀನ್ ಮುಜವಾರ್ ಸಭೆ ಉದ್ದೇಶಸಿ ಮಾತನಾಡಿದರು, ಸಭೆಯಲ್ಲಿ ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿದ್ದರು. ಠಾಣಸಿಬ್ಬಂದಿ ಬಸವರಾಜ್ ಇಂಗಳದಾಳ್ ಕಾರ್ಯಕ್ರಮ ನಿರೂಪಿಸಿದರು.