ಹೂಗಾರ ಸಮಾಜದಿಂದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್ 
ಲಿಂಗಸಗೂರು : ಪಟ್ಟಣದಲ್ಲಿ ಲಿಂಗಸ್ಗೂರು ತಾಲ್ಲೂಕು ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ದಿವ್ಯ  ಸಾನಿದ್ಯ ವಹಿಸಿ ಮಾತನಾಡಿದ  ಶ್ರೀ  ಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು
ಮನ ಗೆದ್ದು ಮಾರು ಗೆದಿಯುವವರು ಹೂಗಾರರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದಿನದಿಂದ ದಿನಕ್ಕೆ ಹೂಗಾರ ಸಮಾಜ ಸಂಘಟಿತರಾಗುತ್ತಿರುವುದು ಖುಷಿಯ ವಿಚಾರ ಕೇವಲ  ಸಭೆ ಸಮಾರಂಭಗಳನ್ನ ಮಾಡುವುದರಿಂದ‌ ಮಾತ್ರ ಸಮಾಜಗಳು ಮುಂದೆ ಬರುವುದಿಲ್ಲ, ಬದಲಾಗಿ ಅಭಿವೃದ್ಧಿ ಪರ ಚಿಂತನೆಗಳಿಂದ ಸಮಾಜವನ್ನ ಮುನ್ನಡೆಸಿದಾಗ ಮಾತ್ರ ಅದು ಸಾಧ್ಯ ಎಂದರು.ನಂತರ ತಾಲೂಕ ಸಂಘದ  ಉಪಾಧ್ಯಕ್ಷ ಶಿವಮಹಾಂತೇಶ್ ಹೂಗಾರ್ ಮಾತನಾಡಿ ಅಮರೇಶ್ವರ ಗುರು ಗಜದಂಡ ಶಿವಾಚಾರ್ಯರ ಕೃಪಾಶಿರ್ವಾದವೇ ರಾಜ್ಯ ಮಟ್ಟದಲ್ಲಿ ಲಿಂಗಸ್ಗೂರು ತಾಲ್ಲೂಕು ಹೂಗಾರ ಸಮಾಜದ ಸಂಘಟನೆಯನ್ನ ಬೆಳೆಯುವಂತೆ ಮಾಡಿದೆ ಎಂದರು.ಕಾರ್ಯಕ್ರಮಕ್ಕೆ ಮುಖ್ಯತಿಥಿಯಾಗಿ ಆಗಮಿಸಿದ  ವಿಶ್ವನಾಥ್ ಹೂಗಾರ್ ಮಾತನಾಡಿ ಸಮಾಜಕ್ಕಾಗಿ ತುಡಿಯುವ ಮನಸ್ಥಿತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡಾಗ ಮಾತ್ರ ಸಮಾಜದ ಪರ ಹಾಕಿಕೊಂಡ ಯೋಜನೆಗಳು ಯಶಸ್ವಿಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಅಚ್ಚುಕಟ್ಟಾಗಿ ಕ್ಯಾಲೆಂಡರ್ ನಿರ್ಮಾಣ ಮಾಡಿದ ಹನುಮೇಶ್ ಹೂಗಾರ್ ಅವರನ್ನ ಸನ್ಮಾನಿಸಲಾಯಿತು.ಬಸವರಾಜ್ ಹೂಗಾರ್ ನಿರೂಪಿಸಿದರು. ಮಹಾಂತಮ್ಮ ಸಂಗಪ್ಪ ಹೂಗಾರ್ ಪ್ರಾರ್ಥನೆ ಗೀತೆ ಹಾಡಿದರು
ಈ ಸಂದರ್ಭ ಗೌರವಾಧ್ಯಕ್ಷ ಮಂಜುನಾಥ ಹೂಗಾರ್, ಅಧ್ಯಕ್ಷ ಮಲ್ಲಪ್ಪ ಹೂಗಾರ್, ಶಿವಮಹಾಂತೇಶ್ ಹೂಗಾರ್, ವೆಂಕಟೇಶ್ ಹೂಗಾರ್, ನಾಗರಾಜ್ ಹೂಗಾರ್, ಡಾ. ಮಲ್ಲೇಶ್ ಹೂಗಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Share this Article
error: Content is protected !!