ಕಣ್ಮರೆಯಾದ ಕೃಷಿ ಪ್ರೀಯ….

Nagaraj M
0 Min Read
ತಾವರಗೇರಾ : ಕೃಷಿ ಪ್ರೀಯ  ಸಂಪಾದಕ ಶರಣಪ್ಪ ಕುಂಬಾರ ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಕಳೆದ 25 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿರುವ ಶರಣಪ್ಪ ಕುಂಬಾರ ತಮ್ಮ ಕ್ರಿಯಾಶೀಲ,ಸರಳತೆ ಹಾಗೂ ವಿಶೇಷ ಬರಹಗಳಿಂದ ಅಪಾರ ಓದುಗರು ಮತ್ತು ಸ್ನೇಹಿತರ ಬಳಗವನ್ನ ಹೊಂದಿ ಪತ್ರಿಕೆಯ ಬರಹಗಳಲ್ಲಿ ತಮ್ಮದೇ  ಛಾಪು ಮೂಡಿಸಿದ್ದ ಅವರು  ಬುಧವಾರ ರಾತ್ರಿ ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದು ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಗುರುವಾರ ಮದ್ಯಾಹ್ನ 1ಗಂಟೆಗೆ ಅವರ ಸ್ವಗ್ರಾಮವಾದ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ  ಅಂತ್ಯಕ್ರಿಯೆ ನಡೆಯಲಿದೆ.
ಮೃತರಿಗೆ ಒಂದು ಗಂಡು ಮಗು ಇದ್ದು  ಅಪಾರ ಬಂಧು ಬಳಗವನ್ನು ಬಿಟ್ಟು  ಅಗಲಿದ್ದಾರೆ.
Share this Article
error: Content is protected !!