ಇಂದು ಮುದಗಲ್ಲಿಗೆ ಜೆಡಿಎಸ್ ರಾಜ್ಯಾಧ್ಯಕ್ಷ  ಸಿ ಎಂ ಇಬ್ರಾಹಿಂ

Nagaraj M
1 Min Read

ನಾಗರಾಜ ಎಸ್ ಮಡಿವಾಳರ :
ಮುದಗಲ್ : ಬುಧವಾರ ಪಟ್ಟಣದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಘಟಕಾಧ್ಯಕ್ಷ  ಅಮಿರ್ ಬೇಗ ಉಸ್ತಾದ್ ಮಾಹಿತಿ ನೀಡಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು
ಜಾತ್ಯತೀತ ಜನತಾದಳ ದಿಂದ ಬುಧವಾರ ಸಂಜೆ 4 ಗಂಟೆಗೆ ಲಿಂಗಸಗೂರು ತಾಲೂಕಾ ಮಟ್ಟದ ಅಲ್ಪಸಂಖ್ಯಾತರ ಸಮಾವೇಶ  ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುದಗಲ್ ಪಟ್ಟಣದ ರಂಗಮಂದಿರ ಆವರಣದಲ್ಲಿ ನಡೆಯಲಿದ್ದು ಕಾರ್ಯಕ್ರಮಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಆಗಮಿಸಿ  ಲಿಂಗಸಗೂರು ವಿಧಾನ ಸಭಾ ಕ್ಷೇತ್ರದಲ್ಲಿ  ಜೆಡಿಎಸ್ ಪಕ್ಷ ವಿಜಯಪತಾಕೆ ಹಾರಿಸಲು ಮುನ್ನುಡಿ ಹಾಡಲಿದ್ದಾರೆ, ಸಾವಿರಾರು ಜನ ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.
Share this Article
error: Content is protected !!