ದಿವಾಕರ ಪೂಜಾರ್ ವಯೋ ನಿವೃತ್ತಿ ಕಾರ್ಯಕ್ರಮ

Nagaraj M
1 Min Read

ನಾಗರಾಜ್ ಎಸ್ ಮಡಿವಾಳರ

ಮುದಗಲ್ : ಪಟ್ಟಣದ ಬಾಲಕರ ಪ್ರೌಢ ಶಾಲಾ ಉಪ ಪ್ರಾಂಶುಪಾಲ ದಿವಾಕರ ಪೂಜಾರ್ ರವರ ವಯೋ ನಿವೃತ್ತಿ ಕಾರ್ಯಕ್ರಮ ಜರುಗಿತು.
ಸ್ಥಳೀಯ ಜೂನಿಯರ್ ಕಾಲೇಜಿನಲ್ಲಿ ನಡೆದ ದಿವಾಕರ ಪೂಜಾರ್ ರವರ ವಯೋ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಕಿಯರ ಪ್ರೌಢ ಶಾಲೆಯ ಮುಖ್ಯಗುರುಗಳಾದ ಬಾಲಚಂದ್ರ ಡಿಕೆ ಪೂಜಾರ್ ರವರು ಒಬ್ಬ ಮಾದರಿ ಶಿಕ್ಷಕ ಹಾಗೂ ಸರಳಜೀವಿ ನೂರಾರು ವಿದ್ಯಾರ್ಥಿಗಳಿಗೆ ಆದರ್ಶ ಶಿಕ್ಷಕಗಾಗಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ,ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಷ್ಟ ಕರವಾಗಿದೆ ಇಂತಹ ಸಮಯದಲ್ಲಿ ಬಹಳ ಅಚ್ಚುಕಟ್ಟಾಗಿ ತಮ್ಮ ವೃತ್ತಿಯನ್ನ ನಿರ್ವಹಿಸಿದ್ದಾರೆ ಎಂದರು ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಗೌಡರ, ಚಂದ್ರಶೇಖರ ಕುಂಬಾರ, ಮಲ್ಲಪ್ಪ, ಶಿಕ್ಷಕರಾದ ಪ್ರಭುಲಿಂಗ ಗದ್ದಿ, ಬಿ.ವಿ ಅಂದ್ರಹಾಳ, ಚನ್ನಬಸವ ಮೇಟಿ ಮಾತನಾಡಿದರು. ಶಾಲೆಯ ವತಿಯಿಂದ ದಿವಾಕರ ಪೂಜಾರ್ ಹಾಗೂ ಪತ್ಮಿ ಭೀಮಮ್ಮ ರವರಿಗೆ ಗೌರವ ಸನ್ಮಾನ ಮಾಡಿದರು.ಈ ಸಂದರ್ಭದಲ್ಲಿ ಕನ್ನಾಳ ಪ್ರೌಢ ಶಾಲೆಯ ಮುಖ್ಯಗುರು ಷರೀಫ್, ಎಸ್ ಎನ್ ಹಕ್ಕಿ ಪ್ರಭಾರಿ ಪ್ರಾಂಶುಪಾಲರಾದ ಬಸವರಾಜ
ಸೇರಿದಂತೆ ವಿದ್ಯಾರ್ಥಿಗಳು, ಸಹ ಶಿಕ್ಷಕರು, ಬಿಜೆಪಿ ಮುಖಂಡರಾದ ನಾಗರಾಜ್ ತಳವಾರ, ಕರಿಯಪ್ಪ ಯಾದವ್ ಇನ್ನಿತರರು ಇದ್ದರು.

Share this Article
error: Content is protected !!