ನಾಳೆ ಕಾಂಗ್ರೆಸ್, ಜೆಡಿಎಸ್ ಪಕ್ಷದ 200ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ : ಸಿದ್ದಯ್ಯ ಸ್ವಾಮಿ 

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ
ಮುದಗಲ್ : ನಾಳೆ 200ಕ್ಕೂ ಹೆಚ್ಚು ಜೆಡಿಎಸ್ ಹಾಗೂ  ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ನಾಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಘಟಕಧ್ಯಕ್ಷ ಸಣ್ಣ ಸಿದ್ದಯ್ಯ ಸ್ವಾಮಿ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಅವರು ನಾಳೆ ರಾಮಲಿಂಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ  ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಮುಖಂಡರು ಸೇರಿದಂತೆ 200ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಮುಂಬರುವ ಚುನಾವಣೆಯಲ್ಲಿ  ಲಿಂಗಸಗೂರು ಕ್ಷೇತ್ರದಲ್ಲಿ ಕಮಲ ಅರಳಿಸಲು ಶ್ರಮ ವಹಿಸಲಿದ್ದಾರೆ ಸೂರ್ಯ ಚಂದ್ರರು ಎಷ್ಟು ಸತ್ಯವೋ  ಮಾನಪ್ಪ ವಜ್ಜಲರು ಶಾಸಕರಾಗುವುದು ಅಷ್ಟೇ ಸತ್ಯ ಎಂದರು.
ನಂತರ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತ  ರಫಿ ನಾನು ಮೊದಲು ಬಿಜೆಪಿ ಪಕ್ಷದಲ್ಲಿ ಇದ್ದೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕರು ಒಳ್ಳೆಯ ವ್ಯಕ್ತಿ ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಒತ್ತಾಯ ಮಾಡಿದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯದೆ ಆದರೆ ಪಕ್ಷಕ್ಕೆ ಸೇರ್ಪಡೆಯಾದ ಮೇಲೆ ನಮ್ಮ ವಾರ್ಡಿನ ಸಮಸ್ಯೆ ಕುರಿತು ಶಾಸಕರಿಗೆ ಕರೆ ಮಾಡಿ ಸಮಸ್ಯೆ ಕುರಿತು ತಿಳಿಸಿದಾಗ ಶಾಸಕರು ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಪುರಸಭೆ ಅಧ್ಯಕ್ಷಮೇಲೆ ರೆಗಾಡಿರುವುದು ನನಗೆ ಬೇಸರ ತಂದಿದ್ದು  ನನ್ನ ಮಾತೃ ಪಕ್ಷದಲ್ಲಿ ಈ ರೀತಿ ಇರಲಿಲ್ಲ ಎಂದು ಮನವರಿಕೆಯಾಗಿ ಮತ್ತೆ ನಾನು ಬಿಜೆಪಿಗೆ  ಸೇರ್ಪಡೆಯಾಗುತ್ತಿದ್ದೇನೆ ಪಕ್ಷಕ್ಕಾಗಿ ವಜ್ಜಲ್ಲರ ಗೆಲುವಿಗಾಗಿ ದುಡಿಯುತ್ತೇನೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದವಾಲಿಸಬ ಜಂಗಲಿ  , ಉದಯ ಕುಮಾರ ಕಮ್ಮಾರ,ಭಾಷಾ ಜಂಬಾಳಿ,ಸಲೀಂ ಮೇಸ್ತ್ರಿ,ಸನಂ,ಖಜಾಉದ್ದಿನ ಇದ್ದರು.
Share this Article
error: Content is protected !!