ಮಾಡಿದ ಸಾಲಕ್ಕೆ ಪರಿಹಾರ ನೀಡು ಎಂದು ಗಣೇಶನ  ಹುಂಡಿಯಲ್ಲಿ ಚೀಟಿ ಹಾಕಿದ ಭಕ್ತ

Nagaraj M
0 Min Read
ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದ ಪುರಸಭೆ ರಂಗಮಂದಿರ ಆವರಣದಲ್ಲಿ  ಸಾರ್ವಜನಿಕ ಗಣೇಶ ಮಂಡಳಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಯನ್ನ ಶುಕ್ರವಾರ ವಿಸರ್ಜನೆ ಮಾಡಲಾಯಿತು.
ಭಕ್ತರು ಅರ್ಪಿಸಿರುವ ಹುಂಡಿ ಹಣ ಎಣಿಕೆ ಕಾರ್ಯ ಸಂದರ್ಭದಲ್ಲಿ ಹತ್ತು ರೂಪಾಯಿ ನೋಟಿನ ಜೊತೆಗೆ  ನಾನು ಮಾಡಿದ ಸಾಲದ ಪರಿಹಾರಕ್ಕೆ ದಾರಿ ತೋರಿಸು ದೇವರೇ ಎಂದು ಹರಕೆ ಚೀಟಿ ಬರೆದು ಹುಂಡಿಗೆ ಹಾಕಿದ್ದು ವಿಶೇಷವಾಗಿತ್ತು. ಹುಂಡಿ ಹಣ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ಈ ಚೀಟಿ ಬರುತ್ತಿದ್ದಂತೆ ಭಾವುಕರಾದ ಆ  ಭಕ್ತನ ವಿಗ್ನಗಳನ್ನ ನಿವಾರಣೆ ಮಾಡು ಎಂದು ವಿಗ್ನವಿನಾಶಕರಲ್ಲಿ ಬೇಡಿಕೊಂಡರು.
Share this Article
error: Content is protected !!