ಸಿಡಿಲು ಬಡಿದು 6 ಕುರಿ, ಓರ್ವ ಯುವಕನ ಸಾವು 

Nagaraj M
0 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಸಮೀಪದ ಬನ್ನಿಗೋಳ  ಗ್ರಾಮದಲ್ಲಿ ಗುರುವಾರ  ಸಂಜೆ  ಮಳೆ, ಗುಡುಗು, ಸಿಡಿಲು ಹೊಡೆದ ಪರಿಣಾಮ ಓರ್ವ ಯುವಕ ಹಾಗೂ 2 ಆಡು 4 ಕುರಿಗಳು ಮೃತಪಟ್ಟಿವ ಘಟನೆ ನಡೆದಿದೆ.
ಬನ್ನಿಗೋಳ ಗ್ರಾಮದ ಯುವಕ  ರಾಮಪ್ಪ ತಂದೆ ಬಸಪ್ಪ ಪೂಜಾರಿ (26)  ಸಿಡಿಲು ಬಡಿದು ಮೃತಪಟ್ಟ ಕುರಿಗಾಯಿ. ಆಡು,ಕುರಿ ಗಳನ್ನು ಮೇಯಿಸಲು ಗ್ರಾಮದ ಹೊರ ವಲಯಕ್ಕೆ  ಹೋಗಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳೀಯ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
Share this Article
error: Content is protected !!