ಮೇ 26ಕ್ಕೆ 101 ಸಾಮೂಹಿಕ ವಿವಾಹ ಮಹೋತ್ಸವ : ಶಿವಪುತ್ರ ಗಾಣಾಧಾಳ 

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಮೇ 26ರಂದು ಲಿಂಗಸಗೂರು ಪಟ್ಟಣದಲ್ಲಿ 101  ಸಾಮೂಹಿಕ ವಿವಾಹ ಮಹೋತ್ಸವ ಜರುಗಳಿವೆ ಎಂದು ಕರುನಾಡ ವಿಜಯಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪುತ್ರ ಗಾಣಾಧಾಳ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ದಿನಾಂಕ 26-05-2022 ರಂದು ಲಿಂಗಸಗೂರು ಪಟ್ಟಣದ  ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 101 ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ  ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸಿದ್ದಗಂಗಾ ಮಠ  ತುಮಕೂರು ಇವರು ವಹಿಸಲಿದ್ದಾರೆ ಹಾಗೂ ರಾಜ್ಯದ ವಿವಿಧ ಮಠಾಧೀಶರು, ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಇಚ್ಛಿಸಿದರು ಲಿಂಗಸಗೂರು ತಾಲೂಕ ವಿಜಯ ಸೇನೆಯ ಕಚೇರಿಗೆ ಭೇಟಿನೀಡಿ  ಅಥವಾ 9901676087,  9632055426,    9844934973, 8317426148,   9538411769  ಈ ದೂರವಾಣಿ ಸಂಖ್ಯೆಗಳ  ಮೂಲಕ ಸಂಪರ್ಕಿಸಿ ಎಂದರು. ಈ ಸಂದರ್ಭ ಕರುನಾಡ ವಿಜಯ ಸೇನೆ ಘಟಕಧ್ಯಕ್ಷ ಮೌನೇಶ ಚಲುವಾದಿ, ತಾಲೂಕ ಪ್ರಧಾನ ಕಾರ್ಯದರ್ಶಿ ಸುರೇಶ ಮಡಿವಾಳ ಚಂದ್ರು ಹಿರೇಮಠ, ರಮೇಶ್ ಸುಂಕದ, ಚಂದ್ರಶೇಖರ ನಾಯಕ ಇನ್ನಿತರ ಸಂಘಟನೆ  ಪದಾಧಿಕಾರಿಗಳು,ಯುವಕರು ಇದ್ದರು.
Share this Article
error: Content is protected !!