ರಾಯಚೂರು : ಜಿಲ್ಲೆಯಾದ್ಯಂತ 144ಸೆಕ್ಷನ್ ಜಾರಿ   ಶಾಲೆ, ಕಾಲೇಜುಗಳಿಗೆ ರಜೆ..

Nagaraj M
0 Min Read
ನಾಗರಾಜ್ ಎಸ್ ಮಡಿವಾಳರ 
ರಾಯಚೂರು :  ಹಿಜಾಬ್ ವಿಚಾರಣೆಯಲ್ಲಿ ಉಚ್ಚ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡಲಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆ ಅಲರ್ಟ್ ಆಗಿದ್ದು, ರಾಯಚೂರು  ಜಿಲ್ಲೆಯ ಎಲ್ಲ   ಸ್ಕೂಲ್​​,ಕಾಲೇಜುಗಳಿಗೆ ಒಂದು ದಿನದ  ರಜೆ ಘೋಷಿಸಲಾಗಿದ್ದು, ಯಾವುದೇ  ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವಂತೆ 15-03-2022 ಬೆಳಿಗ್ಗೆ 8ಗಂಟೆಯಿಂದ  17-03-2022ರ ಬೆಳಿಗ್ಗೆ 8ಗಂಟೆಯ  ವರೆಗೆ  144 ಸೆಕ್ಷನ್ ಜಾರಿ ಗೊಳಿಸಿ ರಾಯಚೂರು ಜಿಲ್ಲಾಧಿಕಾರಿ ಡಾ ಅವಿನಾಶ್ ಮನನ್ ರಾಜೇಂದ್ರನ್ ರವರು ಆದೇಶ ಒರಡಿಸಿದ್ದಾರೆ. ಜಿಲ್ಲೆಯಲ್ಲಿ  ನಿಷೇಧಾಜ್ಞೆ ಹೇರಲಾಗಿದ್ದು, 5ಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ,ಹಾಗೂ ಮೆರವಣಿಗೆ ನಿಷೇಧಿಸಲಾಗಿರುತ್ತದೆ.
Share this Article
error: Content is protected !!