ಮುದಗಲ್ : ನಾಳೆ ಶಿವಾಜಿ ಜಯಂತಿ 

Nagaraj M
1 Min Read

ನಾಗರಾಜ್ ಎಸ್ ಮಡಿವಾಳರ
ಮುದಗಲ್ :  ಪಟ್ಟಣದಲ್ಲಿ ಶುಕ್ರವಾರ ಶಿವಾಜಿ ಜಯಂತಿ ಆಚರಣೆ ಮಾಡಲಾಗುವುದು ಎಂದು ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ ಹೇಳಿದರು.
ಪಟ್ಟಣದ ಶ್ರೀ ಶರಣಮ್ಮ ಮಾತೇ ಗೋ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಗರದ  ಚಾವಡಿಕಟ್ಟಿ ಯಿಂದ  ಶಿವಾಜಿಮಹಾರಾಜರ ಫೋಟೋ ಮೆರವಣಿಗೆಗೆ
ಮಾಜಿ ಸೈನಿಕ ಪಂಪಣ್ಣ ಜಾವುರ ಚಾಲನೆ ನೀಡಲಿದ್ದಾರೆ  ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಸಾಗಿ  ಶ್ರೀ ನಗರೇಶ್ವರ ದೇವಸ್ಥಾನದ ವೇದಿಕೆ ತಲುಪಲಿದೆ.  ಸಾರ್ವಜನಿಕರು ಜಯಂತಿಯಲ್ಲಿ ಪಾಲ್ಗೊಂಡು ಶಾಂತಿಯುವವಾಗಿ ಜಯಂತಿಯನ್ನ ಯಶಸ್ವಿಗೊಳಿಸಬೇಕೆಂದು ಪತ್ರಿಕೆಗಳ ಮೂಲಕ ವಿನಂತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಸಣ್ಣ ಸಿದ್ದಯ್ಯ ಸ್ವಾಮಿ, ಮಹಾಂತೇಶ್ ಅಕ್ಷತಿ, ಮಲ್ಲಪ್ಪ ಮಾಟೂರ್ ಹಾಗೂ ಶಿವಾಜಿ ಸೇನೆಯ ಯುವಕರು ಇದ್ದರು.
Share this Article
error: Content is protected !!