ದಲಿತ ಸಂಘಟನೆಗಳಿಗೆ ಕ್ಷಮೆ ಯಾಚಿಸಿದ ಶಾಸಕ ಹೂಲಗೇರಿ…..

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ಪಟ್ಟಣದಲ್ಲಿ  ಕಳೆದ ಬುಧವಾರ  73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಲಿತ ಪರ ಸಂಘಟನೆಗಳಿಗೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಕ್ಷಮೆಯಾಚಿಸಿದ್ದಾರೆ.
ತಾಲೂಕಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 73ನೇ ಗಣರಾಜೋತ್ಸವ ಕಾರ್ಯಕ್ರಮದ ಬ್ಯಾನರ್ ನಲ್ಲಿ ಮಹಾತ್ಮ ಗಾಂಧಿಯ ಫೋಟೋ ಮಾತ್ರ ಹಾಕಿ ಅಂಬೇಡ್ಕರ್ ಫೋಟೋ ಇಲ್ಲದ ಕಾರಣ ದಲಿತ ಪರ ಸಂಘಟನೆಗಳು ಲಿಂಗಸಗೂರು ಸಹಾಯಕ ಆಯುಕ್ತ ರಾಹುಲ್ ಸಂಕನೂರರಿಗೆ ತರಾಟೆಗೆ ತೆಗೆದುಕೊಂಡರು.ಸ್ಥಳದಲ್ಲೇ ಇದ್ದ ಶಾಸಕರು  ತಾಲೂಕಾಡಳಿತದ ಕಡೆಯಿಂದ ತಪ್ಪಾಗಿದೆ ಅದಕ್ಕೋಸ್ಕರ ನಾನು ಕ್ಷಮೆ ಕೇಳುತ್ತೇನೆ ಎಂದು ಶಾಸಕರು ಸಂಘಟನೆಗಾರರಿಗೆ ಕ್ಷಮೆ ಕೇಳಿ  ವಾತಾವರಣ ತಿಳಿಗೊಳಿಸಿದರು.
Share this Article
error: Content is protected !!