ರಸಪ್ರಶ್ನೆ ಕಾರ್ಯಕ್ರಮ ಮುಂದಕ್ಕೆ

Nagaraj M
1 Min Read


ಲಿಂಗಸುಗೂರು: ಕರ್ನಾಟಕ ಜಾನಪದ ಪರಿಷತ್ತು, ಲಿಂಗಸುಗೂರು ಮಹಿಳಾ ಘಟಕದಲ್ಲಿ ಜ.8 ರಂದು ನಡೆಯಬೇಕಾಗಿದ್ದ ರಸಪ್ರಶ್ನೆ ಕಾರ್ಯಕ್ರಮ ಸರ್ಕಾರದ ಜಾರಿಗೆ ತಂದ ಕೋವೀಡ್ ನಿಯಮದಿಂದಾಗಿ ಮುಂದುಡಲಾಗಿದೆ ಎಂದು ಲಿಂಗಸುಗೂರು ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀದೇವಿ ನಡವಿನಮನಿ ಹೇಳಿದರು.


ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹೀಗಾಗಲೇ ತಾಲ್ಲೂಕು ಹಾಗೂ ಜಿಲ್ಲೆ ವಿವಿಧ ಶಾಲಾ-ಕಾಲೇಜುಗಳಿಂದ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಣಿ ಮಾಡಿಸಿದ್ದಾರೆ. ರಾಜ್ಯದಲ್ಲಿ ವಿಕೆಂಡ್ ಕರ್ಫೂ ಇರುವದರಿಂದ ಕಾರ್ಯಕ್ರಮ ನಡೆಸಲು ಆಗುತ್ತಿಲ್ಲ. ಕೋವೀಡ್ ನಿಯಮ ಸಡಲಗೊಂಡಾಗ ಕಾರ್ಯಕ್ರಮ ನಡೆಸುತ್ತೇವೆ ಎಂದರು.
ಕರ್ನಾಟಕ ಜಾನಪದ ಪರಿಷತ್ತು ಲಿಂಗಸುಗೂರು ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ಶಿವಾನಂದ ನರಹಟ್ಟಿ, ಮಹಿಳಾಘಟಕದ ಗೌರವಾಧ್ಯಕ್ಷೆ ಶಿವಮ್ಮ ಪಟ್ಟದಕಲ್, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಮೂಲಿಮನಿ ಇದ್ದರು.

Share this Article
error: Content is protected !!