ಕಲ್ಯಾಣಕರ್ನಾಟಕಕ್ಕೆ 3ಸಾವಿರ ಕೋಟಿರೂ ಕ್ರಿಯಾಯೋಜನೆ ಸಿದ್ದ : ಬೊಮ್ಮಾಯಿ

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್ 
ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ  ಅಭಿವೃದ್ದಿಗೆ 3ಸಾವಿರ  ಕೋಟಿ ರೂ ಗಳ ಕಾರ್ಯಯೋಜನೆ
ಸಿದ್ದವಾಗಿದ್ದು ಮುಂಬರುವ ಬಜೆಟ್ ನಲ್ಲಿ ಮಂಡಿಸಿ ಒಂದೇ ವರ್ಷದಲ್ಲಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಕಲಬುರಗಿಯ ಪೂಜ್ಯ ಶ್ರೀ ಬಸವರಾಜಪ್ಪ ಅಪ್ಪ ಸಭಾಭವನದಲ್ಲಿ ಮಂಗಳವಾರ  ನಡೆದ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  36  ನೇ ರಾಜ್ಯ ಪತ್ರಕರ್ತರ ಸಮ್ಮೇಳ ಉದ್ಘಾಟಿಸಿ  ಮಾತನಾಡಿದ ಅವರು ಕಲ್ಯಾಣ ಕರ್ನಾಟಕದ ಕೊಡುಗೆಯನ್ನು ಸ್ಮರಿಸಿದ ಸಿಎಂ, ನಮ್ಮ ಸರ್ಕಾರ ಇಡೀ ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಬದ್ದವಾಗಿದೆ. ಶೀಘ್ರ ಈ ಭಾಗದ ಎಲ್ಲ ಪ್ರತಿನಿಧಿಗಳ ಸಭೆ ಕರೆದು ಅಭಿವೃದ್ಧಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇನೆ. ಇದಕ್ಕೆ ಹಣಕಾಸು ಒದಗಿಸುವುದರ ಜೊತೆಗೆ ಒಂದೇ ವರ್ಷದಲ್ಲಿ ಅಭಿವೃದ್ದಿ ಸಾಕಾರ ಮಾಡಲಾಗುವುದು ಹಾಗೂ ಗ್ರಾಮೀಣಭಾಗದ ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಈಗಾಗಲೇ  ಸರಕಾರ ಮುಂಗಾಗಿದ್ದು ಮತ್ತು  ಪತ್ರಕರ್ತರಿಗಾಗಿ ಆಯುಷ್ ಕಾರ್ಡ್ ನೀಡುವ ಬರವಸೆ ನೀಡಿದರು.
Share this Article
error: Content is protected !!