ಮುದಗಲ್ ಕೋಟೆ ಉತ್ಸವಕ್ಕೆ ಶ್ರಮಿಸುತ್ತೇನೆ- ಇಟಗಿ

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಚುನಾವಣೆಯಲ್ಲಿ ಗೆಲವು ಸಾಧಿಸಿದರೆ ಮುದಗಲ್ ಕೋಟೆ ಉತ್ಸವಕ್ಕೆ ಶ್ರಮಿಸುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಭೀಮನಗೌಡ ಇಟಗಿ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ಮಠದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಧ್ಯಕ್ಷನಾದರೆ ಐತಿಹಾಸಿಕ ಪ್ರಸಿದ್ಧವಾದ ಮುದಗಲ್ ಕೋಟೆ ಉತ್ಸವ ಮಾಡಲು ಶ್ರಮಿಸುತ್ತೇನೆ. ಜಿಲ್ಲೆಯ ಯಾವುದೇ ಕಾರ್ಯಕ್ರಗಳು ಬಂದರೆ ಮುದಗಲ್ ಗೆ ಆದ್ಯತೆ ನೀಡುತ್ತೇವೆ ಎಂದರು.ಪಟ್ಟಣದ ಸಾಹಿತಿಗಳು ಹಾಗೂ ವಿವಿಧ ಸಂಘಟಕರು ಪಟ್ಟಣದ ವಿವಿಧ ಬೀದಿಗಳಲ್ಲಿ ಹಾಗೂ ಅಂಗಡಿಗಳಿಗೆ ತರಳಿ ಭೀಮನಗೌಡ ಮತ ಹಾಕುವಂತೆ ಮನವಿ ಮಾಡಿದರು.ನಿಕಟ ಪೂರ್ವ ಅಧ್ಯಕ್ಷ ಡಾ. ಬಸವಪ್ರಭು ಪಾಟೀಲ, ಗುರಬಸಪ್ಪ ಸಜ್ಜನ್, ಮಾಶೂಮ್ ಶರೀಫ್, ರಾಘು ಕುದರಿ, ಉಮೇಶ ಮಠ, ಶಿಕ್ಷಕ ಸಂಗಮೇಶ ಮಾತನಾಡಿದರು.
ಮಾಪಾಷಾ ದುಂ ದುಂ, ಆಬಿದ್ ಹುಸೇನ್, ನಾಗರಾಜ ದಫೇದಾರ್, ಮಲ್ಲಪ್ಪ ಮಾಟೂರು, ಮಲ್ಲಪ್ಪ ಹೂಗಾರ, ಡಾ. ಅಮರೇಶ ಕುಂಬಾರ ಇದ್ದರು.
Share this Article
error: Content is protected !!