ಪರಿಶಿಷ್ಟ ಜಾತಿಯ ವ್ಯಕ್ತಿಗೆ ಹಲ್ಲೆ : 10 ಮಂದಿಯ ಮೇಲೆ ಪ್ರಕರಣ ದಾಖಲು, ನಾಲ್ವರ ಬಂಧನ 

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ :  ಕಳೆದ ಒಂದು ವರ್ಷದ ಹಿಂದೆ ಪರಿಶಿಷ್ಟ ಜಾತಿಯ ಬೈಲಪ್ಪ ಹನುಮಪ್ಪನ ಮಗಳು ಕಿಲಾರಹಟ್ಟಿ ಗ್ರಾಮದ ಲಕ್ಷ್ಮಪ್ಪ ಭೀಮಪ್ಪ ಕಿಲ್ಲಾರಹಟ್ಟಿ ಜತೆ ಹೋಗಿದ್ದಾಳೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎರೆಡು ಕುಟುಂಬಗಳ ಮದ್ಯ  ಶನಿವಾರ ರಾತ್ರಿ ಗಲಾಟೆಯಾಗಿದೆ.  ಬೈಲಪ್ಪ ಹನುಮಪ್ಪನ ಮನೆಗೆ  ಹೋಗಿ ಎಳೆದು ತಂದು ಗ್ರಾಮದ ಅಗಸಿ ಮುಂದಿನ  ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ  ಮಾಡಿದ್ದಾರೆ.ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದಂತೆ ಹೆಚ್ಚುವರಿ ವರಿಷ್ಠಾಧಿಕಾರಿ ಶ್ರೀ ಹರಿಬಾಬು, ಸಿಪಿಐ ಸಂಜೀವ್, ಪಿಎಸ್ಐ ಡಾಕೇಶ್ ಯು ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ರಾತ್ರಿ 4 ಜನರನ್ನ ಪೊಲೀಸ್ ಬಂಧನ ಮಾಡಿದ್ದಾರೆ. ಶಂಕರಗೌಡ ಬುಕ್ಕನಗೌಡ, ಬುಕ್ಕನಗೌಡ ನೀಲನಗೌಡ, ಗದ್ದೆಮ್ಮ ನೀಲನಗೌಡ, ದುರಗನಗೌಡ ಬುಕ್ಕನಗೌಡ, ಹನುಮನಗೌಡ ಶಂಕರಗೌಡ, ಲಕ್ಕಮ್ಮ ಶಂಕರಗೌಡ, ಸೂರಪ್ಪಗೌಡ ಹೊಳೆಯಪ್ಪಗೌಡ, ಅಮರೇಗೌಡ ಹನುಮನಗೌಡ, ಹನುಮನಗೌಡ ತಿಪ್ಪನಗೌಡ  ರ ಮೇಲೆ ಪ್ರಕರಣ ದಾಖಲಾಗಿದೆ.
Share this Article
error: Content is protected !!