ಮಕ್ಕಳು ದೇಶದ ಭವಿಷ್ಯ : ಅಮೀನ್ ಸಾಬ್

Nagaraj M
1 Min Read

ವರದಿ : ನಾಗರಾಜ್ ಎಸ್ ಮಡಿವಾಳರ್

ಗಂಗಾವತಿ : ಮಕ್ಕಳು ದೇಶದ ಭವಿಷ್ಯ ಅವರು ಉತ್ತಮರಾದರೆ ದೇಶ ಉತ್ತುಂಗಕ್ಕೆ ಎರುತ್ತದೆ ಎಂದು ಪ್ರಾಚಾರ್ಯ ಅಮೀನ್ ಸಾಬ್ ಹೇಳಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಲಕನಮರಡಿ ಯಲ್ಲಿ ನೆಹರೂರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ
ಮಕ್ಕಳ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ವಿಜಯಶಾಲಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.ಈ ಸಂದರ್ಭದಲ್ಲಿ ನಿಲಯ ಪಾಲಕಿ ಸಾವಿತ್ರಿ ,ಶಿಕ್ಷಕರಾದ ಬಸವರಾಜ್, ಸಿದ್ದಪ್ಪ.ಜಿ, ಆಂಜನೇಯ,ಶಿಕ್ಷಕಿಯಾರಾದ
ನಸ್ರಿನ್ ಬಾನು, ಅಮೃತಾ, ಲಾವಣ್ಯ, ಅನುರ್ಜ ಬೇಗಂ, ಹುಲಿಗೆಮ್ಮ, ಪಾರ್ವತಿ ದೇವಿ ಇದ್ದರು.

Share this Article
error: Content is protected !!