ವಿದ್ಯುತ್ ಇಲಾಖೆ ನಿರ್ಲಕ್ಷ : ಸುಟ್ಟು ಬೂದಿಯಾದ 20ಲಕ್ಷ ರೂ ಬೆಳೆ 

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಸಮೀಪದ ಹೊಸೂರು ಗ್ರಾಮದಲ್ಲಿ
ಬುಧವಾರ ಮದ್ಯಾಹ್ನ 12.30ರ ಸುಮಾರಿಗೆ ಹೊಲದಲ್ಲಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ ವೈರ್ ಒಂದಕ್ಕೆ ಒಂದು ತಾಗಿ  ಅದರಿಂದ ಉಂಟಾದ ಬೆಂಕಿಯಿಂದ ಸುಮಾರು 12 ಎಕರೆಯಲ್ಲಿ ಇದ್ದ ಕಬ್ಬು ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ .
ಬೆಂಕಿಗೆ ಆಹುತಿಯಾದ ಕಬ್ಬಿನ  ಬೆಳೆ  3ಎಕರೆ ಸಂಗಣ್ಣ ರಾಮಾತ್ನಾಳ ,9ಎಕರೆ ಶರಣಗೌಡ ಬೆರಗಿ ಎಂಬುವವರಿಗೆ ಸೇರಿದ್ದಾಗಿದೆ.  ರೈತರು ತಮ್ಮ ಹೊಲದಲ್ಲಿ   ವಿದ್ಯುತ್ ವೈರ್‌ಗಳನ್ನು  ಕಬ್ಬಿನ ಬೆಳೆಗೆ ತಾಕುವಂತೆ ಕೆಳಗೆ ಇದ್ದವು ವಿದ್ಯುತ್  ಇಲಾಖೆ ನಿರ್ಲಕ್ಷದ ಕಾರಣ ಈ ಅವಘಡ ನಡೆದಿದೆ ಎಂದು ರೈತರು ಕಣ್ಣೀರಿಟ್ಟರು.
  ರೈತರ ಆಕ್ರೋಶ: ವಿದ್ಯುತ್ ಇಲಾಖೆಗೆ ಎಷ್ಟು ಬಾರಿ ಮನವಿ ಮಾಡಿಕೊಂಡರು ಕೂಡ ವಿದ್ಯುತ್ ಇಲಾಖೆ ಸಿಬ್ಬಂದಿಗಳು ನಿರ್ಲಕ್ಷ ತೋರಿದ್ದರು ಈಗ  ಆ ವಿದ್ಯುತ್ ವೈರ್‌ನಿಂದ ಉಂಟಾದ ಬೆಂಕಿ ಕಿಡಿಯಿಂದ
ಬೆಳೆಗಳಿಗೆ ಬೆಂಕಿ ತಗುಲಿದೆ. ಸಿಬ್ಬಂದಿಗಳು ಸಕಾಲದಲ್ಲಿ  ಸ್ಪಂದಸಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ. ಬೆಂಕಿ ಅನಾಹುತಕ್ಕೆ ವಿದ್ಯುತ್  ಅಧಿಕಾರಿಗಳೇ ನೇರ ಹೊಣೆಗಾರರಾಗಿದ್ದು, ಬೆಂಕಿ ಅನಾಹುತದಿಂದ ನೊಂದಿರುವ ರೈತರಿಗೆ ನಷ್ಟ ಭರಿಸಿಕೊಡುವಂತೆ ರೈತರು ಆಗ್ರಹಿಸಿದ್ದಾರೆ.
Share this Article
error: Content is protected !!