ಮುದಗಲ್  : ಅಕ್ರಮ ಕಳ್ಳಬಟ್ಟಿ ಮಾರಾಟ ಅಬಕಾರಿ ಪೊಲೀಸರ  ದಾಳಿ

Nagaraj M
1 Min Read

ವರದಿ : ನಾಗರಾಜ್ ಎಸ್ ಮಡಿವಾಳರ್

ಮುದಗಲ್  : ಸಮೀಪದ ಬಯ್ಯಾಪುರ ತಾಂಡದಲ್ಲಿ ಅಬಕಾರಿ ಪೊಲೀಸರು  ದಾಳಿ ನೆಡಸಿ 8 ಲೀಟರ್  ಕಳ್ಳಬಟ್ಟಿ ಸಾರಾಯಿ ವಶಕ್ಕೆ ಪಡೆದಿದ್ದಾರೆ.ಬಯ್ಯಾಪುರ ತಾಂಡದಲ್ಲಿ ಶನಿವಾರ ರುಕ್ಮವ್ವ ಎಂಬುವವರ  ಮನೆಯಲ್ಲಿ  ಅಕ್ರಮವಾಗಿ ಮಾರಾಟ ಮಾಡುತ್ತಿದ್ದ  8 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಆರೋಪಿತಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಈ ಸಂದರ್ಭ ಜಿಲ್ಲಾ ಅಬಕಾರಿ ಉಪ ನಿರೀಕ್ಷಕ ಬಸಲಿಂಗಪ್ಪ , ಲಿಂಗಸೂಗೂರು ಅಬಕಾರಿ ನಿರೀಕ್ಷಕಿ ಸರಸ್ವತಿ, ರಾಯಚೂರು ಡಿ ಸಿ ಸಿ ಬಿ ಅಬಕಾರಿ ನಿರೀಕ್ಷಕಿ  ಶೈಲಜಾ, ಸಿಂಧನೂರ ಅಬಕಾರಿ ನಿರೀಕ್ಷಕ ಸಿದ್ಧಾರೂಢ , ಅಬಕಾರಿ ಉಪ ನಿರೀಕ್ಷಕಾರದ  ಲಿಂಗರಾಜು , ಯಮನೂರು  ಹಾಗೂ ಮುದಗಲ್ ಪೊಲೀಸ್ ಠಾಣೆಯ ಸಿಬ್ಬಂದಿ ಆಂಜನೇಯ ಇದ್ದರು.

Share this Article
error: Content is protected !!