ಜೆಸ್ಕಾಂ ಇಲಾಖೆ ನಿರ್ಲಕ್ಷ್ಯ ಇಬ್ಬರ ಸಾವು

Nagaraj M
1 Min Read

ವರದಿ : ನಾಗರಾಜ್ ಎಸ್ ಮಡಿವಾಳರ್

ಮುದಗಲ್: ಸಮೀಪದ ಸಂತೆಕಲ್ಲೂರು ಗ್ರಾಮದಲ್ಲಿ ಗುಲ್ಬರ್ಗ ವಿದ್ಯುತ್ ನಿಗಮದ ನಿರ್ಲಕ್ಷ್ಯದಿಂದ ಇಬ್ಬರ ಸಾವು ಒಬ್ಬರ ಸ್ಥಿತಿ ಗಂಭೀರವಾಗಿದೆ
ಎಂದು ಮುದಗಲ್ ಪುರಸಭೆ ಸದಸ್ಯ ಶೇಖ ರಸೂಲ ಆರೋಪಿಸಿರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ತ ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಣೆ ಮಾಡುವಾಗ ಗ್ರಾಮದ ಹುಸೇನ ಆಲಂ ದರ್ಗಾದ ಮುಂದೆ ಹೈಹೊಲ್ಟೇಜ್ ವಿದ್ಯುತ್ ಲೈನ್ ದೇವರ ಪಾಂಜಾ ತಗುಲಿದೆ ದೇವರ ಹಿಡಿದ ಹಸನಸಾಬ ಮತ್ತು ದೇವರಿಗೆ ಹರಕೆ ತೀರಿಸಲು ಬಂದ ಹುಲಿಗೆಮ್ಮ ಎಂಬುವ ಮಹಿಳೆಗೆ ವಿದ್ಯುತ್ ಪ್ರವರಿಸಿ ಸಾವನಪ್ಪಿದ್ದಾರೆ. ದೇವರ ಹಿಂದೆ ಹಗ್ಗ ಹಿಡಿರುವ ವ್ಯಕ್ತಿಗೆ ವಿದ್ಯುತ್ ಸ್ಪರ್ಶವಾಗಿದೆ. ಘಟನೆಯಲ್ಲಿ ನಾಲ್ಕು ಜನ ಗಾಯಗೊಂಡಿದ್ದಾರೆ. ಗಾಯಲುಗಳು ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

Share this Article
error: Content is protected !!