ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ರಾಹುಲ್ ಗಾಂಧಿ ಹುಟ್ಟುಹಬ್ಬದ ಆಚರಣೆ

Nagaraj M
1 Min Read
ಪ್ರೀತಿಯ ಓದುಗ  ದೊರೆಗಳೇ,
ಕರೋನ ನಿಯಂತ್ರಣ  ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ ಮೌಲಾಲಿ ದರ್ಗಾದ ಹತ್ತಿರ ಯುವ ಕಾಂಗ್ರೆಸ್ ವತಿಯಿಂದ ಸಸಿ ನೆಟ್ಟು, ಕಾರ್ಯಕರ್ತರಿಗೆ ಸಸಿ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ರಾಷ್ಟ್ರಿಯ ನಾಯಕ ರಾಹುಲ್ ಗಾಂಧಿರವರ ಹುಟ್ಟುಹಬ್ಬದ ಆಚರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾಹುದ್ ಸಾಬ್ ದೇಶದ ಅಭಿವೃದ್ಧಿಗೆ ರಾಹುಲ್ ಗಾಂಧಿರಂತಹ ನಾಯಕ ಮುಖ್ಯ,ಇಂತಹ ಕಾರ್ಯಕ್ರಮವನ್ನ ಪ್ರತಿ ವರ್ಷ ಮಾಡುತ್ತೇವೆ, ರಾಷ್ಟ್ರ ಮಟ್ಟದಲ್ಲಿ ರಾಜಕೀಯ ವ್ಯವಸ್ಥೆ ಮಲಿನವಾಗಿದೆ ಗಿಡಗಳನ್ನು ನೆಡುವ  ಮೂಲಕ ಅದನ್ನು ಸ್ವಚ್ಛ ಗೊಳಿಸೋಣ ಎಂದರು ನಂತರ  ಯುವ ಕಾಂಗ್ರೆಸ್ ಅಧ್ಯಕ್ಷ ಮುನ್ನಾ ಮಾತನಾಡಿದರು. ಈ ಸಂದರ್ಭದಲ್ಲಿ  ಮಹೆಬೂಬ್ ಬಾರೀಗಿಡ, ರಘುವೀರ್,  ಯುವ ಅಧ್ಯಕ್ಷ ಮುನ್ನಾ, ಪುರಸಭೆ ಸದಸ್ಯ ಹಸನ, ಸೈಯದ್ ಸಾಬ, ಹುಸೇನ್ ಅಲಿ, ಕೃಷ್ಣ ಚಲವಾದಿ,  ಅಬೀದ್, ಹಾಗೂ ಇನ್ನಿತರ  ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
Share this Article
error: Content is protected !!