ಪೌರಕಾರ್ಮಿಕರಿಂದ ಕೇಕ್ ಕತ್ತರಿಸುವ ಮೂಲಕ  ಅಂಬೇಡ್ಕರ ಜಯಂತಿ ಆಚರಣೆ

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದ ಪುರಸಭೆ ಆವರಣದಲ್ಲಿ    ಭಾರತೀಯ ದಲಿತ ಪ್ಯಾಂಥರ ನಗರ ಘಟಕ ವತಿಯಿಂದ ಸಂವಿಧಾನ ಶಿಲ್ಪಿ  ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ  130ನೇ ಜಯಂತಿಯನ್ನು  ಪೌರ   ಕಾರ್ಮಿಕರೊಂದಿಗೆ ಅಂಬೇಡ್ಕರ ರವರ  ಫೋಟೋಗೆ ಹೂವಿನ ಹಾರ ಹಾಕಿ, ಪುಷ್ಪ ನಮನ ಸಲ್ಲಿಸಿ  ಕೇಕ್ ಕತ್ತರಿಸುವ ಮೂಲಕ  ವಿಶಿಷ್ಟ ರೀತಿಯಲ್ಲಿ ಜಯಂತಿ  ಆಚರಣೆ ಮಾಡಿದರು. ಈ ಸಂದರ್ಭದಲ್ಲಿ  ಭಾರತೀಯ ದಲಿತ ಪ್ಯಾಂಥರ ನಗರ ಘಟಕ ಅಧ್ಯಕ್ಷ ಕೃಷ್ಣ ಚಲುವಾದಿ ಪುರಸಭೆ ಮುಖ್ಯಾಧಿಕಾರಿ ಮರೀಲಿಂಗಪ್ಪ , ರಮೇಶ ಚಲುವಾದಿ , ಬಸವರಾಜ ಬಂಕದಮನಿ, ಶರಣಪ್ಪ ಕಟ್ಟಿಮನಿ, ರಘುವೀರ್ ಚಲುವಾದಿ, ಕಾಂಗ್ರೆಸ್ ಮುಖಂಡರಾದ ಮೈಬುಬಸಾಬ ಬಾರೀಗಿಡ, ಪುರಸಭೆ ಸದಸ್ಯರಾದ ಗುಂಡಪ್ಪ ಗಂಗಾವತಿ , ದುರಗಪ್ಪ ಕಟ್ಟಿಮನಿ, ಮೈಬುಬಸಾಬ್ ಕಟ್ಟಿಪುಡಿ, ದೇವೇಂದ್ರ ಚಲವಾದಿ, ದೇವಪ್ಪ ತೆಳಗಡೆಮನಿ, ಪೌರ ಕಾರ್ಮಿಕರರಾದ ದೇವಮ್ಮ, ಸರೋಸ್ವತಿ,  ಬಸಮ್ಮ ಮೇಗಲಮನಿ,  ಸಿದ್ದವ್ವ, ಆಟೋ ಚಾಲಕ ದೇವೇಂದ್ರ,  ಹುಸೇನಿ, ಸಂಜೀವಪ್ಪ  ಹಾಗೂ ವಿವಿಧ ಸಂಘಟನೆ ಮುಖಂಡರು ಇದ್ದರು.
Share this Article
error: Content is protected !!