ಬಿಜೆಪಿ ಪಕ್ಷದಿಂದ ಮಾತ್ರ ಸಣ್ಣ ಸಮುದಾಯಗಳ   ಅಭಿವೃದ್ಧಿ  ಸಾಗಲು ಸಾಧ್ಯ – ರಘು ಕೌಟಿಲ್ಯ

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದಲ್ಲಿರುವ ಹುನಗುಂದ ಶಾಸಕ ದೊಡ್ಡನಗೌಡರ ನಿವಾಸದಲ್ಲಿ ಬುಧವಾರ
ಹಿಂದುಳಿದ ಸಮುದಾಯವಾದ  ಗೋಂಧಳೀ ಸಮಾಜದ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ  ಮಾತನಾಡಿದ
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ
  ಬಿಜೆಪಿ ಪಕ್ಷದಿಂದ ಮಾತ್ರ ಸಣ್ಣ ಸಮುದಾಯಗಳ   ಅಭಿವೃದ್ಧಿಯಾಗಲು  ಸಾಧ್ಯ. ಒಂದು ಜಾಗದಲ್ಲಿ ನೆಲೆ ನಿಲ್ಲದ ಅಲೆಮಾರಿ ಜನಾಂಗದ ವ್ಯಾಪ್ತಿಗೆ ಒಳಪಡುವ ನೀವು ಸಂಘಟಿತರಾಗಿ ಒಂದೆಡೆ ಸೇರಿರುವುದು ಸಂತಸ ತಂದಿದೆ,
ಇಂತಹ ಸಮುದಾಯಗಳಿಂದಲೇ ದೇಶದ ಸಂಸ್ಕೃತಿ ಉಳಿದುಕೊಂಡಿದೆ. ಹಾಗೂ  ಶಿಕ್ಷಣ ಮತ್ತು ಎಲ್ಲಾ ಸಮುದಾಯಗಳ ಸಾಮಾಜಿಕ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವ ಬಿಜೆಪಿ ಇಂತಹ ಸಮುದಾಯಗಳಿಗೆ ಹೆಚ್ಚಿನ ಒತ್ತು ಕೊಟ್ಟಿರುವ  ಮುಖ್ಯಮಂತ್ರಿ ಯಡಿಯೂರಪ್ಪರ  ಶಕ್ತಿಗೆ ಗೋಂಧಳೀ ಸಮಾಜ ಸಾಥ್   ನೀಡಿ ಮಸ್ಕಿ  ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಮತ್ತಷ್ಟು ಶಕ್ತಿ ತುಂಬಬೇಕೆಂದರು.ಈ ಸಂದರ್ಭದಲ್ಲಿ ಕುರಿ ಮತ್ತು ಹುಣ್ಣಿ ನಿಗಮದ ಅಧ್ಯಕ್ಷ ಶರಣು ತಳ್ಳಹಳ್ಳಿ , ಚಂದ್ರು  ಹಾಗೂ  ಗೋಂಧಳೀ ಸಮಾಜದ ಪ್ರಮುಖರು ಇದ್ದರು.
Share this Article
error: Content is protected !!