ಪಂಚ ಧರ್ಮಗಳ ಪೀಠ ಸ್ಥಾಪಿಸಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ- ಭೀಮನಗೌಡ ವಂದ್ಲಿ

Nagaraj M
1 Min Read


ಉದಯವಾಹಿನಿ :
ಕವಿತಾಳ :
ಜಗತ್ತಿನಾದ್ಯಂತ ಸಂಚರಿಸಿ ಧರ್ಮ ಪರಿ ಪಾಲನೆ ಮಾಡಲು ಪಂಚ ಧರ್ಮಗಳ ಪೀಠ ವನ್ನು ಸ್ಥಾಪಿಸಿದ ಕೀರ್ತಿ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಭೀಮನಗೌಡ ವಂದ್ಲಿ ಹೇಳಿದರು.

ಪಟ್ಟಣದ ಶ್ರೀ ಕಲ್ಮಠ ದಲ್ಲಿ ಶ್ರೀ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಂಭಾಪುರಿ. ಉಜ್ಜಯಿನಿ ಶ್ರೀ ಶೈಲ್ಯ ಕಾಶಿ ಹಾಗೂ ಕೇದಾರನಾಥ ಎನ್ನುವ ಪಂಚ ಧರ್ಮ ಪೀಠಗಳನ್ನು ಸ್ಥಾಪಿಸಿದರು. ದೇಶದ ವಿವಿಧ ಭಾಗಗಳಲ್ಲಿ ಮಠ. ಮಂದಿರಗಳನ್ನು ನಿರ್ಮಿಸುವ ಮೂಲಕ ಅನ್ನದಾನ. ವಿಧ್ಯಾಧಾನ ಹಾಗೂ ಜ್ಞಾನಧಾನವನ್ನು ಸಾವಿರಾರು ಜನರಿಗೆ ನೀಡಲಾಗುತ್ತಿದೆ ವೀರಶೈವ ಧರ್ಮ ಸ್ಥಾಪಿಸಿದ ಕೀರ್ತಿ ಸಹ ಶ್ರೀ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಜಯ ರಾಜ ಹಿರೇಮಠ. ಮಹಾಂತೇಶ್ ಹಿರೇಮಠ. ಸೂಗಪ್ಪ ಸಾಹುಕಾರ. ಶಿವಕುಮಾರ್. ಮೊರೆಪ್ಟ ಹೂಗಾರ. ಸಿದ್ದಯ್ಯ ಸ್ವಾಮಿ.ಶಾಂತ ಕುಮಾರ್. ತಿಪ್ಪಯ್ಯ ಸ್ವಾಮಿ. ವೀರೇಶಯ್ಯ ಸ್ವಾಮಿ. ಪಂಪಯ್ಯ ಸ್ವಾಮಿ. ಸೂಗುರೇಶ. ಬಸವ. ಸಂಗಯ್ಯ ಸ್ವಾಮಿ ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು

Share this Article
error: Content is protected !!