
ಮುದಗಲ್ : ಕರೋನ ಮಹಾಮಾರಿಯಿಂದ ದೇಶವೇ ಕುಗ್ಗಿ ಹೋಗಿದ್ದು ಈಗ ಕರೋನ ವೈರಸ್ ತಡೆಯುವ ಲಸಿಕೆ ಬಂದಿದ್ದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಅನಂತಕುಮಾರ್ ಪಟ್ಟಣದಲ್ಲಿ 45 -59 ವರ್ಷದವರು, ಅಧಿಕ ರಕ್ತದ ಒತ್ತಡ, ಮದುಮೇಹ ಮತ್ತು ಇನ್ನಿತರ ಯಾವುದೇ ಖಾಯಿಲೆ ಇರುವವರು, ಮತ್ತು 60 ವರ್ಷ ಮತ್ತು 60 ವರ್ಷ ದಾಟಿದ ಹಿರಿಯ ನಾಗರಿಕರು ಆಧಾರ್ ಕಾರ್ಡ್ ನೊಂದಿಗೆ ಬಂದು ಕರೋನ ಲಸಿಕೆ ತೆಗೆದುಕೊಳ್ಳಿ ಪಟ್ಟಣದ ಆರೋಗ್ಯಕೇಂದ್ರದಲ್ಲಿ ಸೋಮವಾರ, ಬುಧುವಾರ, ಶುಕ್ರವಾರ, ಶನಿವಾರ ಲಸಿಕೆಯನ್ನು ಹಾಕಲಾಗುತ್ತದೆ.ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ದೇಶವನ್ನ ಕರೋನದಿಂದ ರಕ್ಷಿಸಲು ಸಹಕರಿಸಿ ಎಂದು ಪತ್ರಿಕೆ ಮೂಲಕ ತಿಳಿಸಿದ್ದಾರೆ.