ಶ್ರೀ ಸತ್ಯ ಸಂತ ಸೇವಾಲಾಲ್ ಮಹಾರಾಜರ 282ನೇ ಜಯಂತಿ ಆಚರಣೆ

Nagaraj M
1 Min Read


ಉದಯವಾಹಿನಿ :
ಕವಿತಾಳ :
ಬಂಜಾರ ಸಮುದಾಯದ ಸಾಮಾಜಿಕ. ಸಾಂಸ್ಕೃತಿಕ. ಆರ್ಥಿಕ ಅಭಿವೃದ್ಧಿಗೆ ಅಧ್ಯಾತ್ಮ ಗುರು ಸತ್ಯ ಸಂತ ಸೇವಾಲಾಲ್ ಮಹಾರಾಜರು ಎಂದು ಪಿಎಸ್ಐ ವೆಂಕಟೇಶ್. ಎಂ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶ್ರೀ ಸತ್ಯ ಸಂತ ಸೇವಾಲಾಲ್ ಮಹಾರಾಜರ 282ನೇ ಜಯಂತಿಯನ್ನು ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಬಸವ. ಬುದ್ಧ ಕಬೀರ್. ಗುರು ನಾನಕ್ ಮುಂತಾದ ಧಾರ್ಮಿಕ ಮಾನವತಾವಾದಿಗಳ ಮಧ್ಯೆ ಒಬ್ಬ ಸಾಮಾನ್ಯ ದನಗಳನ್ನು ಮೇಯಿಸುತ್ತಾ ದನಗಾಹಿ ಗೋಪಲನಾಗಿದ್ದ ಸೇವಾಲಾಲ್ ತಮ್ಮ ಜೀವನ ಅನುಭವದ ಮೂಲಕ ಗೌರವಯುತ ಮಾತುಗಳಲ್ಲಿ ಸತ್ಯ. ಅಹಿಂಸಾ ಮಾರ್ಗಗಳನ್ನು ಪ್ರಕಾಶಗೊಳಿಸುವ ನಿಟ್ಟಿನಲ್ಲಿ ತಮ್ಮ ಭೋದನ ಯನ್ನು ನಡೆಸಿದರು. ಸಾಮಾನ್ಯ ಸರಳ ವ್ಯಕ್ತಿ ಸದ್ಗುರು ಸೇವಾಲಾಲ್ ರ ಅನುಭವದ ಜ್ಞಾನದ ನುಡಿಗಳು ಇಂದಿಗೂ ಮಾರ್ಗದರ್ಶನವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೋಲಿಸ್ ಠಾಣೆಯ ಸಿಬ್ಬಂದಿ ಶಂಕರ್ ರಾಥೋಡ್. ಮಲ್ಲಿಕಾರ್ಜುನ. ಸುರೇಶ್. ಶಿವಕುಮಾರ ರಾಥೋಡ್ ಇತರರು ಇದ್ದರು

Share this Article
error: Content is protected !!