ಲಿಂಗಸಗೂರು : ಬರಹಗಾರರ ಸಂಘ ಅಸ್ತಿತ್ವಕ್ಕೆ

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ್ 
ಲಿಂಗಸಗೂರು :  ಪಟ್ಟಣದಲ್ಲಿ ಸಂಘದ ತಾಲೂಕು ಬರಹಗಾರ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ವೀರೇಶ ಎಸ್. ಎಮ್ ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಮಧು ನಾಯ್ಕ್ ಅವರ ಸಾರಥ್ಯದಲ್ಲಿ ರಾಜ್ಯ ಮಟ್ಟದಲ್ಲಿ ಬರಹಗಾರರ ಸಂಘ ಅಸ್ತಿತ್ವಕ್ಕೆ ತರಲಾಗಿದೆ.
ಈಗಾಗಲೇ 28 ಜಿಲ್ಲೆಗಳಲ್ಲಿ ಸಂಘದ ಕಾರ್ಯ ಆರಂಭವಾಗಿದ್ದು, ರಾಯಚೂರು ಜಿಲ್ಲೆಯಲ್ಲಿಯೂ ಶೀಘ್ರದಲ್ಲೇ ಚಾಲನೆ ನೀಡಿ
ಕಾವ್ಯ ಕಮ್ಮಟ, ಕಥಾ ಕಮ್ಮಟ,ಕವಿಗೋಷ್ಠಿ, ವಿಚಾರ ಸಂಕೀರಣಗಳನ್ನು  ಹಮ್ಮಿಕೊಂಡು ಹೊಸ ತಲೆಮಾರಿನ ಯುವ  ಬರಹಗಾರರಿಗೆ ಆದ್ಯತೆ ನೀಡಲಾಗುವುದು ಎಂದರು. ವೈವಿಧ್ಯಮಯ ಕಾರ್ಯಕ್ರಮಗಳನ್ನು  ಆಯೋಜಿಸುವ ಮೂಲಕ ಸಂಘದ ಆಶಯ ಈಡೇರಿಸುವತ್ತ ತಾಲೂಕ ಘಟಕ ಶ್ರಮಿಸಬೇಕು ಎಂದರು .
ಈ ಸಂದರ್ಭ  ಜಿಲ್ಲಾ ಉಪಾಧ್ಯಕ್ಷ ಹಾಜಿಬಾಬ, ಜಿಲ್ಲಾ ಸ. ಕಾರ್ಯದರ್ಶಿ ಕೆ.ಬಿ ಹಿರೇಮಠ, ತಾಲೂಕು ಅಧ್ಯಕ್ಷ ದುರ್ಗಾಸಿಂಗ್, ಸಂಶೋಧಕ ಡಾ. ಮಹಾದೇವಪ್ಪ ನಾಗರಾಳ, ಪ್ರೊ. ನಿರುಪಾದಿ ಖೈರವಾಡಗಿ ಇದ್ದರು.
Share this Article
error: Content is protected !!