ಮುದಗಲ್ : ಭೀಕರ ಅಪಘಾತ-ಇಬ್ಬರು ಸ್ಥಳದಲ್ಲೇ ಸಾವು

Nagaraj M
1 Min Read

ವರದಿ : ನಾಗರಾಜ್ ಎಸ್ ಮಡಿವಾಳರ್

ಮುದಗಲ್ : ಕಾರು ಹಾಗೂ ಬೈಕ್​ ನಡುವಿನ ಭೀಕರ ಅಪಘಾತದಲ್ಲಿ ಬೈಕ್​ ಇಬ್ಬರು ಸವಾರರು ದಾರುಣ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರಭಾಗದಲ್ಲಿ ಹಾದು ಹೋಗುವ ಗಂಗಾವತಿ ರಸ್ತೆ, ನಿರುಪಾದೇಶ್ವರ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಕುಣಿಕೆಲ್ಲೂರು ಗ್ರಾಮದ ನಿವಾಸಿಗಳಾದ
ಮಟ್ಟೂರ ಗ್ರಾಮದ ವಾಟರ್ ಮನ್ ಗದ್ದೆಪ್ಪ (೩೮), ಅಂದಪ್ಪ (೨೬) ಕುಣಿಕೆಲ್ಲೂರು ಮೃತ ದುರ್ದೈವಿಗಳು. ಅಪಘಾತ ಸಂಭವಿಸಿ ಬೈಕ್ ನಿಂದ ಹೊರ ಬಿದ್ದಾಗ ಬೈಕ್ ಗೆ ಬೆಂಕಿ ಹತ್ತಿ ಒತ್ತು ಉರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಮಸ್ಕಿ ಸಿಪಿಐ ದೀಪಕ ಭೂಸರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ.

Share this Article
error: Content is protected !!