ಕುಷ್ಟಗಿಯ ವಿರೇಶ ಶಾಸ್ತ್ರಿಯವರಿಗೆ ಒಲಿದ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ

N Shameed
1 Min Read

 

ಎನ್ ಶಾಮೀದ್ ತಾವರಗೇರಾ

 ಕುಷ್ಟಗಿಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ವೈದಿಕ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕೊಡಮಾಡುವ ” ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ ಗೆ ಕುಷ್ಟಗಿಯ ಕಾಳಾಪುರ ಮಠದ ವೇಧಮೂರ್ತಿ ವಿರೇಶ ಶಾಸ್ತ್ರಿ ಆಯ್ಕೆ ಯಾಗಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ವಾಸ್ತು ಶಾಂತಿ ವಿಷಯದಲ್ಲಿನ ಸಾಧನೆ ಗೆ ಈ ಪ್ರಶಸ್ತಿಯನ್ನು ಶ್ರೀ ವೈದಿಕ ಚಾರಿಟೇಬಲ್ ಟ್ರಸ್ಟ್ ರಾಷ್ಟ್ರೀಯ ಪುರೋಹಿತ ಘಟಕ ಬೆಂಗಳೂರು ಅವರಿಂದ ನೀಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಡಾ. ಆರ್ ಕೆ ರಾಜಕುಮಾರ ಶಾಸ್ತ್ರಿ ತಿಳಿಸಿದ್ದಾರೆ. ಜನೇವರಿ 16 ರಿಂದ 18 ರ ವರೆಗೆ ನಡೆಯಲಿರುವ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಶ್ರೀ ಮಹಾಲಕ್ಷ್ಮಿ ಗುರುಕುಲ ವೈದಿಕ ಚಾರಿಟೇಬಲ್ ಟ್ರಸ್ಟ್ ರಾಷ್ಟ್ರೀಯ ಪುರೋಹಿತ ಘಟಕ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಉಪ ಕುಲ ಸಚಿವರು ಮತ್ತು ನಿರ್ದೇಶಕ ಡಾ.ಪ್ರಕಾಶ ಆರ್ ಪಾಗೋಜಿ, ಬಿ ಎಸ್ ಪರಮಶಿವಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Share this Article
error: Content is protected !!