ಕುಷ್ಟಗಿ:- ಭಾರತೀಯ ಸಿಲಂಬಮ್ ತಂಡಕ್ಕೆ ಮಹಾಂತೇಶ ಆಯ್ಕೆ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ :- ತಾಲೂಕಿನ ಹನುಮಸಾಗರ ನಿವಾಸಿ ಮಹಾಂತೇಶ ಬೀಳಗಿ ಭಾರತೀಯ ಸಿಲಂಬಮ್ ತಂಡಕ್ಕೆ ತರಬೇತುದಾರರಾಗಿ ನೇಮಕವಾಗಿದ್ದಾರೆ.

ಶ್ರೀಲಂಕಾದಲ್ಲಿ ಜುಲೈ 12ರಿಂದ 3 ದಿನ ನಡೆಯುವ ಎಎಸ್‌ಎಫ್ 3ನೇ ದಕ್ಷಿಣ ಏಷ್ಯಾ ಸಿಲಂಬಮ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾಗುವ ಭಾರತೀಯ ಕ್ರೀಡಾ ಪಟುಗಳಿಗೆ ಇವರು ತರಬೇತಿ ನೀಡಲಿದ್ದಾರೆ. ಇತ್ತೀಚಿಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಅಖಿಲ ಭಾರತ ಸಿಲಂಬಮ್ ಫೆಡರೇಶನ್ ವತಿಯಿಂದ ಆಯೋಜಿಸಿದ್ದ ಎಐಎಸ್‌ಎಫ್ 2ನೇ ಭಾರತೀಯ ಓಪನ್ ಚಾಂಪಿಯನ್‌ ಶಿಪ್‌ ನಲ್ಲಿ ಮಹಾಂತೇಶ ಬೀಳಗಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು.

Share this Article
error: Content is protected !!