Saturday , July 27 2024
Home / Breaking News / ತಾವರಗೇರಾ:- ಲೋಕಸಭೆ ಚುನಾವಣೆ, ಅರೆ ಮಿಲಟರಿ ಪಡೆ ಪಥಸಂಚಲನ..!

ತಾವರಗೇರಾ:- ಲೋಕಸಭೆ ಚುನಾವಣೆ, ಅರೆ ಮಿಲಟರಿ ಪಡೆ ಪಥಸಂಚಲನ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ :- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಿಪಿಐ ಯಶ್ವಂತ್ ಬಿಸನಳ್ಳಿ ಹೇಳಿದರು.

ಅವರು ಪಟ್ಟಣದಲ್ಲಿ ಶುಕ್ರವಾರದಂದು ನಡೆದ ಅರೆ ಮಿಲಿಟರಿ ಪಡೆಯ ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದರು ನಂತರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಥ ಸಂಚಲನ ನಡೆಸಲಾಯಿತು.

ಈ ಸಂದರ್ಭದಲ್ಲಿ ಠಾಣಾಧಿಕಾರಿ ಸುಜಾತ ನಾಯಕ್, ಪಟ್ಟಣ ಪಂಚಾಯತಿಯ ಸಿಬ್ಬಂದಿಗಳಾದ ಶಾಮೂರ್ತಿ ಕಟ್ಟಿಮನಿ, ಶರಣಪ್ಪ ಸೈಂದರ್,, ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಮತ್ತು ಕಂದಾಯ ಇಲಾಖೆಯ ಸೂರ್ಯಕಾಂತ್ ಮಸ್ಕಿ ಇನ್ನಿತರರು ಉಪಸ್ಥಿತರಿದ್ದರು. ಹಾಗು ಅರೆ ಮಿಲಿಟರಿ ಪಡೆಯ ಕಮ್ಯಾಂಡರ್ ಗಳಾದ ಜೇಮ್ಸ್ ಓವಿಂಗಾ,  ಯತ್ಸಾಂಗಬಾ ಸೇರಿದಂತೆ 60 ಜನ ಸಿಬ್ಬಂದಿ ಪಥಸಂಚಲನ ದಲ್ಲಿ ಪಾಲ್ಗೊಂಡಿದ್ದರು.

About N Shameed

Check Also

ಮುದಗಲ್ : ಹಂದಿಗಳನ್ನ ಬಿಡದ ಕಳ್ಳರು ; ಪೊಲೀಸರಿಗೆ ದೂರು 

ನಾಗರಾಜ್ ಎಸ್ ಮಡಿವಾಳರ  ಮುದಗಲ್ : ಹಂದಿಗಳ ಕಳವು ನಡೆದಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣದಲ್ಲಿ …

error: Content is protected !!