ಕಟಾವ್ ಮಷೀನ್ ಗೆ ಸಿಲುಕಿ ವ್ಯಕ್ತಿ ಸಾವು.!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ತೊಗರಿ ಬೆಳೆ ಕಟಾವ ಮಾಡುವ ಯಂತ್ರದ ವಾಹನದ ಹಿಂದಿನ ಗಾಲಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇದ್ಲಾಪೂರ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಪಂಜಾಬ್ ಮೂಲದ ಗುರುದೇವ ಸಿಂಗ್ (58) ಎಂದು ಗುರುತಿಸಲಾಗಿದೆ. ಮುದೇನೂರ ಮೂಲದ ವ್ಯಕ್ತಿಯೊಬ್ಬರು ತೊಗರಿ ಬೆಳೆ ಕಟಾವ ಮಾಡುವ, ಕರೆಯ ಮೇರೆಗೆ ಬಂದಿದದ್ದರೆನ್ನಲಾದ ಚಾಲಕ ಹಾಗು ಸಹಾಯಕನಾಗಿದ್ದಾರೆ.
ಇದ್ಲಾಪುರ ಸೀಮಾದ ಹೊಲ ವೊಂದರಲ್ಲಿ ಚಾಲಕನ ನಿರ್ಲಕ್ಷ್ಯ ದಿಂದ ಹಿಂದೆ ಇದ್ದ ಸಹಾಯಕ ಗುರುದೇವ ಸಿಂಗ್ ನ ಎರಡು ಕಾಲುಗಳ ಮೇಲೆ ವಾಹನದ ಹಿಂದಿನ ಚಕ್ರ ಸಿಲುಕಿ ಗಂಭೀರ ಗಾಯಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ , ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
error: Content is protected !!