ತಾವರಗೇರಾ:- ಸಾಲ ಬಾಧೆ ರೈತ ಆತ್ಮಹತ್ಯೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಸಾಲ ಬಾಧೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಹುಲಿಯಾಪುರ ಗ್ರಾಮದಲ್ಲಿ ನಡೆದಿದೆ .

ಮೃತ ರೈತನನ್ನು ಕಲ್ಲಪ್ಪ ಹನುಮಪ್ಪ ಕತಿಗೇರ (42) ಎಂದು ಗುರುತಿಸಲಾಗಿದ್ದು , ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮೃತ ರೈತನು ಮನ್ನಾಪುರ ಪಿಜಿಬಿ ಬ್ಯಾಂಕ್ ನಿಂದ 2 ಲಕ್ಷ ರೂ ಬೆಳೆ ಸಾಲ ಹಾಗೂ ಕನಕಗಿರಿಯ ಎಲ್ ಎನ್ ಟಿ ಗುಂಪಿನಲ್ಲಿ 1 ಲಕ್ಷ 20 ಸಾವಿರ ಸಾಲ ಪಡೆದಿದ್ದು , ಸಾಲ ತೀರಿಸಲಾಗದೆ, ಕುಡಿತದ ಚಟಕ್ಕೆ ಒಳಗಾಗಿ ಬ್ಯಾಂಕಿನವರು ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮನನೊಂದು ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಗಂಗಾವತಿ ಖಾಸಗಿ ಆಸ್ಪತ್ರೆ ಗೆ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ .

Share this Article
error: Content is protected !!