ಜಾಲಿಹಾಳ ವ್ಯಕ್ತಿಯ ಕೊಲೆ,, ಆರೋಪಿಗಳ ಬಂಧನ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಇತ್ತೀಚೆಗೆ ಹಲ್ಲೆ ನಡೆಸಿ ಯುವಕನು ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅದೇ ಗ್ರಾಮದ ಸಂತೋಷ ಸಿದ್ದಪ್ಪ ಗೋತಗಿ (19) ಹಾಗೂ ದುರುಗಪ್ಪ ಹನುಮಂತ ಪೂಜಾರ (22) , ಕೊಲೆಯಾದ ವ್ಯಕ್ತಿ ಹಾಗೂ ಆರೋಪಿತರು ಒಂದೇ ಸಮುದಾಯದವರಾಗಿದ್ದು. ಕೊಲೆಯಾದ ವ್ಯಕ್ತಿಯು ಕುಡಿದ ನಶೆಯಲ್ಲಿ ಆರೋಪಿ ಸಂತೋಷನಿಗೆ ನಿಮ್ಮ ತಾಯಿ ಹಾಗೂ ಸಹೋದರಿಯನ್ನು ನನ್ನ ಬಳಿ ಕಳಿಸು ಎಂದು ಅವಾಚ್ಚವಾಗಿ ನಿಂದಿಸಿದ್ದ ದ್ವೇಶಕ್ಕಾಗಿ ಹಾಗೂ ಮತ್ತೊಬ್ಬ ಆರೋಪಿಯಾದ ದುರುಗಪ್ಪನ ಪ್ರೇಯಸಿಗೆ ಕೊಲೆಯಾದ ಬಾಗಪ್ಪನು ಅಶ್ಲೀಲ ಸಂದೇಶ ಕಳುಹಿಸಿದ್ದನ್ನು ಕಾರಣವಾಗಿಟ್ಟುಕೊಂಡು ಇಬ್ಬರು ಕೂಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ ಎಂದು ತಿಳಿಸಿದರು.

ಈ ಕುರಿತು ಆರೋಪಿಗಳನ್ನು ಕೆಲವೇ ದಿನಗಳಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಸೂಕ್ತ ಬಹುಮಾನ ನೀಡುವುದಾಗಿ ಹೇಳಿದರು . ಈ ಸಂದರ್ಭದಲ್ಲಿ ಸಿಪಿಐ ಯಶವಂತ ಬೀಸನಳ್ಳಿ, ಪಿಎಸ್ ಐ ಮುದ್ದುರಂಗ ಸ್ವಾಮಿ ಉಪಸ್ಥಿತರಿದ್ದರು .

Share this Article
error: Content is protected !!