ಮಾನವೀಯತೆ ಮೆರೆದ ಬಸ್ ಡ್ರೈವರ್ ಹಾಗು ಕಂಡಕ್ಟರ್..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ಬಸ್ ಪ್ರಯಾಣದ ವೇಳೆ ಪ್ರಯಾಣಿಕನೊಬ್ಬ ತೀವ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಬಸ್ ನ ಡ್ರೈವರ್ ಹಾಗೂ ಕಂಡಕ್ಟರ್ ಪ್ರಯಾಣಿಕನನ್ನು ಕೂಡಲೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಕುಷ್ಟಗಿ ಪಟ್ಟಣದಲ್ಲಿ ಭಾನುವಾರ ನಡೆದಿದೆ.

ಕುಷ್ಟಗಿ ಡಿಪೋ ಗೆ ಸೇರಿದ ಬಸ್ ಹನುಮಸಾಗರ ಕ್ಕೆ ತೆರಳುತ್ತಿದ್ದಾಗ ಬಸ್ ನಲ್ಲಿದ್ದ ಪ್ರಯಾಣಿಕ ಬಸವರಾಜ ಸ್ವಾಮಿ ತಳುವಗೇರಾ ಎಂಬುವವರಿಗೆ ಮೂರ್ಚೆ ಬಂದು ತೀವ್ರ ಅಸ್ವಸ್ಥರಾಗಿದ್ದಾರೆ ಅವರನ್ನು ತಕ್ಷಣವೇ ಬಸ್ ಡ್ರೈವರ್ ಬಸವರಾಜ ಅಕ್ಕಿ ಕಂಡಕ್ಟರ್ ಗೆ ವಿಷಯ ತಿಳಿಸಿ ಪ್ರಾಥಮಿಕ ಚಿಕಿತ್ಸೆ ನೀಡಲು ಯತ್ನಿಸಿದ್ದಾರೆ ಆದರೆ ಪ್ರಯಾಣಿಕನಲ್ಲಿ ಚೇತರಿಕೆಗೆ ಬಾರದಿದ್ದಾಗ ತಕ್ಷಣವೇ ಎಚ್ಚೆತ್ತುಕೊಂಡು ಬಸ್ಸನ್ನು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ಪ್ರಯಾಣಿಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ನೆರವಾಗಿದ್ದಾರೆ.

ಮಾನವೀಯತೆಯೇ ತೊರದ ಇಂದಿನ ದಿನಮಾನಗಳಲ್ಲಿ ಡ್ರೈವರ್ ಹಾಗೂ ಕಂಡಕ್ಟರ್ ಇವರ ನಡೆಗೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇವರಿಬ್ಬರು ಇತರರಿಗೂ ಮಾದರಿಯಾಗಲಿ ಎಂಬುದು ಉದಯ ವಾಹಿನಿಯ ಪತ್ರಿಕೆಯ ಆಶಯವಾಗಿದೆ‌.

Share this Article
error: Content is protected !!