ವರದಿ ಎನ್ ಶಾಮೀದ್ ತಾವರಗೇರಾ
ಕುಷ್ಟಗಿ: ಮೊಹರಂ ಹಬ್ಬದ ಸಂದರ್ಭದಲ್ಲಿ ಅಲಾಯಿ ದೇವರ ಬಳಿ ಬೇಡಿಕೆಗಾಗಿ ಕೇಳಲು ಬಂದ ಮಹಿಳೆಯ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ನಡೆದಿದೆ.
Video Player
00:00
00:00
ಮೊಹರಂ ನ ಖತಲ್ ರಾತ ದಿನದಂದು ದೇವರು ಸವಾರಿ ಹೊರಟ ವೇಳೆ ಗ್ರಾಮದ ನಾಗರತ್ನ ಯಮನೂರಪ್ಪ ನಾಯಕ ಎಂಬುವವರು ಮಕ್ಕಳ ಫಲಗೋಸ್ಕರ ಕೇಳಲು ಬಂದಾಗ ದೇವರ ಪಕ್ಕದಲ್ಲಿ ನಿಂತಿದ್ದ ಮಂಜುನಾಥ ಎಂಬುವವರು ದೇವರು ಹೊತ್ತಿದ್ದ ವ್ಯಕ್ತಿಯ ಕೈಯಲ್ಲಿರುವ ನವಿಲುಗರಿಯನ್ನು ಕಸಿದುಕೊಂಡು ಮಹಿಳೆ ಮೇಲೆ ಹಿಗ್ಗಾ ಮುಗ್ಗಾ ತಳಿಸಿದ್ದು ಅದಕ್ಕೆ ಪ್ರಚೋದನೆ ನೀಡಿದ ಮಲ್ಲಿಕಾರ್ಜುನ ಅವರನ್ನು ಗ್ರಾಮಸ್ಥರು ಹಲ್ಲೆ ಮಾಡುವುದನ್ನು ತಡೆ ಹಿಡಿದರು ಕೂಡ ಮಹಿಳೆಗೆ ಗಾಯಗಳಾಗಿದ್ದು ,ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹಲ್ಲೆ ಮಾಡಿದವರ ವಿರುದ್ದ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲೆಮಾಡಿದ್ದಾರೆ.