ತಾವರಗೇರಾ:- ವಿದ್ಯುತ್ ಅವಘಡ ವ್ಯಕ್ತಿ ಸಾವು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದು ಹಾಗೂ ಸಿಡಿಲಿ ನಿಂದಾಗಿ ಆಕಳು ಸ್ಥಳದಲ್ಲಿ ಮೃತ ಪಟ್ಟ ಘಟನೆ ಜರುಗಿದೆ.

ಉಮಳಿ ರಾಂಪುರ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ ವ್ಯಕ್ತಿಯೊಬ್ಬ ಮೃತ ಪಟ್ಟಿದ್ದು, ಮೃತ ವ್ಯಕ್ತಿಯನ್ನು ಹಂಚಿನಾಳ ಗ್ರಾಮದ ದೇವಪ್ಪ ವಡ್ಡರ (25) ಎಂದು ತಿಳಿದುಬಂದಿದೆ.
ಉಮಳಿ ರಾಂಪೂರ ಗ್ರಾಮದ ಹನುಮಂತ ಪೂಜಾರ ಎಂಬುವರಿಗೆ ಸೇರಿದ ತೋಟದ ಜಮೀನಿನಲ್ಲಿ ವಿದ್ಯುತ್ ಅವಘಡ ಸಂಭವಿಸಿ ಮೃತ ಪಟ್ಟಿರುವದಾಗಿ ತಿಳಿದು ಬಂದಿದೆ.


ಸಂಗನಾಳ:- ಗ್ರಾಮದಲ್ಲಿ ತಡರಾತ್ರಿ ಗಾಳಿ, ಮಳೆ ಹಾಗೂ ಸಿಡಿಲು ಬಡಿದ ಪರಿಣಾಮ ಸಂಗನಾಳ ಗ್ರಾಮದ ಸೋಮಣ್ಣ ಕಂಬಳಿ ಎಂಬ ರೈತರ ಜಮೀನಿನ ತಗಡಿನ ಶೆಡ್ ನಲ್ಲಿ ಆಕಳನ್ನು ಕಟ್ಟಿ ಹಾಕಲಾಗಿತ್ತು, ಸಿಡಿಲಿನ ರಭಸಕ್ಕೆ ಆಕಳು ಸ್ಥಳದಲ್ಲೇ ಮೃತ ಪಟ್ಟಿದೆ, ಸ್ಥಳಕ್ಕೆ ಕಂದಾಯ ಹಾಗೂ ಪೊಲೀಸ್ ಇಲಾಖೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಅಂದಾಜು 45 ಸಾವಿರ ಮೌಲ್ಯದ ಆಕಳು ಎಂದು ಗುರುತಿಸಲಾಗಿದೆ.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

Share this Article
error: Content is protected !!