ತಾವರಗೇರಾ: ಭೀಕರ ರಸ್ತೆ ಅಪಘಾತ, ಒಂದೇ ಕುಟುಂಬದ ಮೂವರು ಸಾವು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ರಸ್ತೆ ಅಪಘಾತದಲ್ಲಿ ಸ್ಥಳೀಯ ಒಂದೇ ಕುಟುಂಬದ 3 ಜನ ಮೃತ ಪಟ್ಟು, ಇಬ್ಬರಿಗೆ ಗಂಭೀರ ಗಾಯವಾದ ಧಾರುಣ ಘಟನೆ ಭಾನುವಾರ ರಾತ್ರಿ ಇಳಕಲ್ ರಾಜ್ಯ ಹೆದ್ದಾರಿ ಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಶಾಮೀದಸಾಬ ಕಿಡದೂರನಾಯಕ (65), ಮೌಲಾಸಾಬ ಕಿಡದೂರನಾಯಕ (60) ಇಬ್ಬರು ಸ್ಥಳದಲ್ಲೇ ಮೃತಪಟ್ಟರೇ , ಇಮಾಮಬಿ ಕಿಡದೂರನಾಯಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆ ಗೆ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿಜಯಪುರ ದಿಂದ ವಾಪಸ್ ತಾವರಗೇರಾ ಕ್ಕೆ ಬರುವ ಸಂದರ್ಭದಲ್ಲಿ ಇಳಕಲ್ ನ ರಾಜ್ಯ ಹೆದ್ದಾರಿ ಯಲ್ಲಿ ಚಾಲಕನ ನಿಯಂತ್ರಣ ತಪ್ಪಿ , ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭಂವಿಸಿದ್ದು ಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ತಾವರಗೇರಾ ಪಟ್ಟಣದ ಕುಟುಂಬಸ್ಥರಲ್ಲಿ ಘಟನೆ ತಿಳಿಯುತ್ತಿದ್ದಂತೆ ಆಕ್ರಂದನ ಮುಗಿಲುಮುಟ್ಟಿದೆ.

Share this Article
error: Content is protected !!