ತಾವರಗೇರಾ:- ಕುಡಿಯಬೇಡೆಂದಿದ್ದಕ್ಕೆ ಆತ್ಮಹತ್ಯೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಕುಡಿತದ ಚಟ ಬಿಡು ಎಂದು ಮನೆಯವರು ಹೇಳಿದ್ದರಿಂದಾಗಿ ಮನನೊಂದ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಮೃತ ಪಟ್ಟ ಘಟನೆ ಜರುಗಿದೆ.

ಮೃತ ವ್ಯಕ್ತಿಯನ್ನು ಪಕ್ಕದ ಸಿಂಧನೂರ ತಾಲೂಕಿನ ವಿರಾಪುರ ಗ್ರಾಮದ ಶಾಮಣ್ಣ ಮಾದರ ವಯಸ್ಸು (43) ಎಂದು ಗುರುತಿಸಲಾಗಿದ್ದು ಮೃತನು ಪಟ್ಟಣದ ಶೇಖರಗೌಡ ಪಾಟೀಲ್ ಇವರ ಜಮೀನಿನಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟ ಬಗ್ಗೆ ತಿಳಿದುಬಂದಿದೆ. ಮೃತ ವ್ಯಕ್ತಿಯು ಹಲವಾರು ದಿನಗಳಿಂದ ಕುಡಿತಕ್ಕೆ ಒಳಗಾಗಿದ್ದು ಮನೆಯಲ್ಲಿ ಕುಡಿಯಬೇಡ ಎಂದು ಹೇಳಿದ್ದರಿಂದಾಗಿ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಡಿಸೆಂಬರ್ 29 ರಂದು ಮನೆ ಬಿಟ್ಟು ಹೋದವನು ಮರಳಿ ಮನೆಗೆ ಬಾರದ ಕಾರಣ ಜನೇವರಿ 1 ರಂದು ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಿಸಿದ್ದರು. ಜನೇವರಿ 15 ಭಾನುವಾರದಂದು ತಾವರಗೇರಾ ಪಟ್ಟಣದ ಸೀಮಾದಲ್ಲಿ ಮೃತ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ಪಿಎಸ್ ಐ ಪುಂಡಪ್ಪ ತಿಳಿಸಿದ್ದಾರೆ.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
error: Content is protected !!