ತಾವರಗೇರಾ:- ಜನಾರ್ಧನ ರೆಡ್ಡಿ ಪಕ್ಷ , ಕಾಂಗ್ರೆಸ್, ಬಿಜೆಪಿ ಮೇಲೆ ಪರಿಣಾಮ ಬೀರಲಿದೆ,:- ಬಯ್ಯಾಪೂರ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗುವುದು ಕಡಿಮೆ ಜನಾರ್ದನ್ ರೆಡ್ಡಿ ಅವರ ಪಕ್ಷದಿಂದ ಸ್ವಲ್ಪಮಟ್ಟಿಗೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರಿಣಾಮ ಬೀರಬಹುದು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಅವರು ಶುಕ್ರವಾರದಂದು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಹಿಂದಿನಿಂದಲೂ ಕೂಡ ಪ್ರಾದೇಶಿಕ ಪಕ್ಷಗಳು ಯಾವುದೇ ರೀತಿಯ ಯಶಸ್ವಿ ಪಡೆಯದಿರುವುದು ನಮ್ಮ ರಾಜ್ಯದಲ್ಲಿ ಕಂಡು ಬಂದಿದೆ ಹಾಗಾಗಿ ಜನಾರ್ಧನ್ ರೆಡ್ಡಿ ಅವರ ಪಕ್ಷದಿಂದ ಕ್ಷೇತ್ರಕ್ಕನುಗುಣವಾಗಿ ಅಲ್ಲಿಯ ಅಭ್ಯರ್ಥಿ ಹಾಗೂ ಕ್ಷೇತ್ರದ ಮತದಾರರ ಅಭಿಪ್ರಾಯದ ಮೂಲಕ ಚುನಾವಣೆ ನಡೆಯುತ್ತದೆ ಆದ್ದರಿಂದಾಗಿ ಆ ಪಕ್ಷದಿಂದ ಅಷ್ಟೊಂದು ಯಶಸ್ಸು ಕಾಣಲು ಸಾಧ್ಯವಿಲ್ಲ ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

ಈ ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಡಾ. ಶಾಮಿದ್ ದೋಟಿಹಾಳ, ನಾರಾಯಣ ಗೌಡ ಮದಿಕೇರಿ, ಚಂದ್ರಶೇಖರ್ ನಾಲತವಾಡ, ಅಮರೇಶ ಗಾಂಜಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Share this Article
error: Content is protected !!