ತಾವರಗೇರಾ: ಭಾವೈಕ್ಯತೆ ಮೆರೆದ ಈದ್ ಮಿಲಾದ್ ಆಚರಣೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಪವಿತ್ರ ಈದ ಮಿಲಾದ್ ಹಬ್ಬವನ್ನು ಸಮಸ್ತ ಮುಸ್ಲಿಂ ಬಾಂಧವರು ಭಾವೈಕ್ಯೆತೆಯಿಂದ ಆಚರಿಸಿರುವುದು ವಿಶೇಷವಾಗಿದೆ.

ಈದ್ ಮಿಲಾದ್ ಅಂಗವಾಗಿ ಸ್ಥಳೀಯ ಜುಮಾ ಮಸೀದಿ ಯಿಂದ ಪ್ರಾರಂಭವಾಗಿ ಊರಿನ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಕನಕದಾಸರ ಪ್ರತಿಮೆಗೆ ನಂತರ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ನಂತರ ಡಾ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಆಗಿರುವುದು ಈದ್ ಮಿಲಾದ್ ಹಬ್ಬದಲ್ಲಿ ಕಂಡು ಬಂದಿತು.

ನಂತರ ಗಾಂಧಿ ವೃತ್ತಕ್ಕೆ ತೆರಳಿದ ಮೆರವಣಿಗೆಯು ಮಹಾತ್ಮ ಗಾಂಧಿಜೀ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪುನಃ ಮಸೀದಿ ಹತ್ತಿರ ಮೆರವಣಿಗೆ ಕೊನೆಗೊಂಡಿತು.

ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಬಯ್ಯಾಪೂರ ಸೇರಿದಂತೆ, ಸ್ಥಳೀಯ ಮುಸಲ್ಮಾನ ಬಾಂಧವರು ಹಾಗೂ ಊರಿನ ಪ್ರಮುಖರು ಪಾಲ್ಗೊಂಡಿದ್ದರು, ಈ ಸಂಧರ್ಬದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾತನಾಡಿ ಸಮಸ್ತ ಮುಸಲ್ಮಾನ ಬಾಂಧವರು ಹಾಗೂ ವಾಲ್ಮೀಕಿ ಸಮುದಾಯ ಬಂಧುಗಳಿಗೆ ಶುಭ ಹಾರೈಸಿದರು.

Share this Article
error: Content is protected !!