ತಾವರಗೇರಾ: ವಿಶೇಷ ದಸರಾ ಆಚರಣೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸ್ಥಳಿಯ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ದಸರಾ ಹಬ್ಬದ ಪ್ರಯುಕ್ತ ಯಾದವ ಸಮಾಜದಿಂದ ಹಾಲುಕಂಬ ಏರುವ ಸ್ಫರ್ಧೆ ನಡೆಯಿತು.
  ಪ್ರತಿ ವರ್ಷದಂತೆ ಯಾದವ ಸಮಾಜದಿಂದ ಬೆಳಿಗ್ಗೆ ಕಂಬಕ್ಕೆ ತಯಾರಿ ನಡೆಸಿದರು. ಸಾಯಂಕಾಲ ಪೂಜಾ ವಿಧಾನ ಮೂಲಕ ಸ್ಪರ್ಧೆಯನ್ನು ಪ್ರಾರಂಭಿಸಲಾಯಿತು ಸ್ಫರ್ಧೇಯಲ್ಲಿ ಸ್ಥಳೀಯ ಯಾದವ ಸಮುದಾಯದ ಶಿವನಗೌಡ ಹನುಮನಗೌಡ ಕಟ್ಟಿಮನಿ ಯವರು ಹಾಲುಗಂಬ ವನ್ನು ಏರುವ ಮೂಲಕ ವಿಜಯಶಾಲಿಯಾದರು, ಪ್ರತಿ ವರ್ಷದಂತೆ ಈ ವರ್ಷವೂ ವಿಜೇತನಿಗೆ ಬೆಳ್ಳಿ ಕಡಗವನ್ನು ಬಹುಮಾನವಾಗಿ ನೀಡಲಾಯಿತು.

ನಂತರ ಪಲ್ಲಕ್ಕಿಯನ್ನು ವಿವಿಧ ಸಮಾಜದ ಮುಖಂಡರ ನೇತೃತ್ವದಲ್ಲಿ ಬನ್ನಿ ಮಹಾಕಾಳಿ ಕಟ್ಟೆಗೆ ವಾಧ್ಯ ಮೆರವಣಿಗೆ ಮೂಲಕ ಕರೆತಂದು, ಪೂಜೆ ನಡೆಸಲಾಯಿತು.

ಹಾಲುಗಂಬ ಏರುವ ಸ್ಪರ್ಧೇ ವೀಕ್ಷಿಸಲು ಪಟ್ಟಣದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹಾಗೂ ವಿವಿಧ ಸಮಾಜದ ಮುಖಂಡರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.

Share this Article
error: Content is protected !!