ಚಂದನ’ಳನ್ನು ಸೆರೆಹಿಡಿಯಲು ಯಶಸ್ವಿಯಾದ ನಾಗರಾಜ ಮಡಿವಾಳರ್

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಮುದುಗಲ್: ಪಟ್ಟಣದ ಹೆಸರಾಂತ ಫೋಟೋಗ್ರಾಫರ್ ಹಾಗೂ ಪತ್ರಕರ್ತ ನಾಗರಾಜ ಎಸ್ ಮಡಿವಾಳರ್ ಅವರು ತನ್ನ ಅಕ್ಕನ ಮಗಳಾದ ಚಂದನ ಎಂಬುವರನ್ನು ತನ್ನ ಜೀವನ ಸಂಗಾತಿಯನ್ನಾಗಿಸಿಕೊಂಡು ಆಯ್ಕೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..!

ಮುದಗಲ್ ಪಟ್ಟಣದ ಭಾರತ ಕಲ್ಯಾಣ ಮಂಟಪದಲ್ಲಿ ದಿನಾಂಕ 15-05-2022 ರಂದು ಮಧ್ಯಾಹ್ನ 12-28 ಕ್ಕೆ ಶುಭ ಮುಹೂರ್ತದಲ್ಲಿ ವಿಜೃಂಭಣೆಯಿಂದ ಜರುಗಿದ ಮದುವೆ ಸಮಾರಂಭಕ್ಕೆ ಕುಟುಂಬಸ್ಥರು ಹಾಗೂ ಅಪಾರ ಬಂಧುಗಳು, ಆಪ್ತ ಮಿತ್ರರರು ಸಾಕ್ಷಿಯಾದರು.ಹೊಸ ದಿಗಂತ ಪತ್ರಿಕೆಯ ‘ಮುದಗಲ್’ ಭಾಗದ ಪತ್ರಕರ್ತರಾಗಿ ಹಾಗೂ ಉದಯವಾಹಿನಿಯ ಉಪ ಸಂಪಾದಕರಾಗಿ ಹೆಸರು ಮಾಡಿರುವ ಬಿ.ಕಾಂ ಪದವೀಧರ ನಾಗರಾಜ ಮಡಿವಾಳರ್ ತಮ್ಮ ಸಹೋದರಿ ಶ್ರೀಮತಿ ನೀಲಮ್ಮ ದಿ.ರಾಮಣ್ಣ ಮಡಿವಾಳರ್ ಇವರ ಜೇಷ್ಠ ಸುಪುತ್ರಿ ಬಿ.ಕಾಂ ಪದವೀಧರೆ ಚಿ.ಕುಂ.ಸೌ. ಚಂದನ ಅವರನ್ನು ವರಿಸಿದರು.

ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಶಾಸಕ ಡಿ.ಎಸ್.ಹೂಲಗೇರಿ, ಮುದಗಲ್ ಪಟ್ಟಣದ ಕಲ್ಯಾಣ ಆಶ್ರಮದ ಶ್ರೀ ಮಹಾಂತಮಹಾಸ್ವಾಮಿಗಳು, ಲಿಂಗಸ್ಗೂರು ಮಾತಾ ಮಾಣಿಕ್ಯೇಶ್ವರಿ, ಮುಖಂಡರಾದ ಸಿದ್ದು ವಾಯ್ ಬಂಡಿ, ಶಿವಪುತ್ರಪ್ಪ ಗಾಣದಾಳ, ಹೊನ್ನೂರಪ್ಪ ಮೇಟಿ, ಶ್ರೀಮಂತ ವಜ್ಜಲ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಹರ್ಷಾ ಮುತಾಲಿಕ್
ಸೇರಿದಂತೆ ಪತ್ರಕರ್ತರಾದ ಎನ್ ಶಾಮೀದ್ , ಶರಣಪ್ಪ ಕುಂಬಾರ, ಭೀಮನಗೌಡ ಪಾಟೀಲ, ಸಂಗಮೇಶ ಮುಶಿಗೇರಿ, ಶಂಕರಾವ್ ಈಳಗೇರ, ಸಾಗರ, ಚನ್ನು ಮಡಿವಾಳರ್, ನರಹರಿ ಪೂಜಾರ ಸ್ಥಳೀಯ ಪತ್ರಕರ್ತರು, ವಿವಿಧ ಪಕ್ಷಗಳ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.

Share this Article
error: Content is protected !!