ಪುರಾಣ ಪ್ರವಚನದ ಜೊತೆಗೆ ಸಂವಿಧಾನ “ಪಠಣ”ವಾಗಲಿ, ಸಿಪಿಐ ನಿಂಗಪ್ಪ ಎನ ಆರ್..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಗ್ರಾಮೀಣ ಭಾಗಗಳಲ್ಲಿ ಪುರಾಣ ‌ಪ್ರವಚನದ ಜೊತೆಗೆ ಸಂವಿಧಾನ ಪಠಣವಾದಾಗ ಮಾತ್ರ ಡಾ. ಬಿ ಆರ್ ಅಂಬೇಡ್ಕರ್ ಅವರು ಕಂಡ ಕನಸು ನನಸಾಗಲು ಸಾಧ್ಯ ಎಂದು ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್ ಹೇಳಿದರು.

ಅವರು ದೋಟಿಹಾಳದಲ್ಲಿ ನಡೆದ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚೆಗೆ ಮೀಯಾಪುರ ಗ್ರಾಮದಲ್ಲಿ ನಡೆದ ಘಟನೆ ಇಡೀ ಮಾನವ ಕುಲಕ್ಕೆ ಮಾಡಿದ ಅವಮಾನವಾಗಿದೆ ಈ ರೀತಿಯ ಘಟನೆಗಳು ನಡೆಯದಂತೆ ಗ್ರಾಮಸ್ಥರು ಎಚ್ಚರ ವಹಿಸಿ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರೊ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ವಸಂತ ಮೇಲಿ‌ನಮನಿ, ಗ್ರಾಪಂ ಸದಸ್ಯರಾದ ಮಹೇಶ ಪಾಟೀಲ, ಶಿವನಗೌಡ ಪೊಲೀಸ ಪಾಟೀಲ್, ಗೌಸುಸಾಬ, ನಾಡಸಾಬ ಯಲಬುರ್ಗಿ , ಷರೀಫ್ ಯರಡೋಣ, ಪಿಡಿಓ ಮುದ್ದಣ್ಣ ಹಾಗೂ ಇನ್ನೀತರರಿದ್ದರು.

Share this Article
error: Content is protected !!