ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದ್ದು ಪಟ್ಟಣದಲ್ಲಿ ಕಂಡು ಬಂತು.

ಈ ಸಂದರ್ಭದಲ್ಲಿ ಕುಷ್ಟಗಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೂಲಕುಂಟಿ, ಪಪಂ ಸದಸ್ಯರಾದ ಬಸನಗೌಡ ಓಲಿ, ದಶರಥ ಸಿಂಗ್, ಹಾಗೂ ಮುಖಂಡ ರಾದ ಚನ್ನಪ್ಪ ಸಜ್ಜನ, ರಂಗಪ್ಪ ಉಪ್ಪಾರ, ಮಂಜುನಾಥ ರಾಂಪೂರ, ಶಿವರಾಜ ನವಲಗುಂದ, ರಮೇಶ ವಿಠಲಾಪುರ, ಶಾಮಣ್ಣ ಮ್ಯಾದರಡೊಕ್ಕಿ, ಬಸವರಾಜ ವಿಠಲಾಪುರ, ಗ್ಯಾನಪ್ಪ ಸೇರಿದಂತೆ ಇನ್ನಿತರರಿದ್ದರು.

Share this Article
error: Content is protected !!