ತಾವರಗೇರಾ: ಸರಳವಾಗಿ ನಡೆದ ಶ್ರೀ ತ್ರೀ ವೀರಭದ್ರೇಶ್ವರ ರಥೋತ್ಸವ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಆರಾಧ್ಯದೈವ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಕೊವೀಡ್ ನಿಯಮನುಸಾರ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸರಳವಾಗಿ ರಥೋತ್ಸವ ಜರುಗಿತು.

ಬೆಳಗಿನ ಜಾವ ಗುಗ್ಗಳ ದೊಂದಿಗೆ ಕಳಸಾರೋಹಣವು ಮೇಗಲಪೇಟೆಯ ವೀರಭದ್ರೇಶ್ವರ ದೇವಸ್ಥಾನದಿಂದ ಆಗಮಿಸಿ ಅಗ್ನಿ ಕುಂಡ ಪ್ರವೇಶಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.
ನಂತರ ಸೂಕ್ತ ಪೊಲೀಸ್ ಬಂದೋಬಸ್ತಿನಲ್ಲಿ ಸರಳವಾಗಿ ರಥೋತ್ಸವ ಜರುಗಿತು.


ಈ ಸಂದರ್ಭದಲ್ಲಿ ಸ್ಥಳೀಯ ಪಿಎಸ್ಐ ವೈಶಾಲಿ ಝಳಕಿ, ಕುಷ್ಟಗಿ ಪಿಎಸ್ಐ ತಿಮ್ಮಣ್ಣ ನಾಯಕ, ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ಡಿ ಆರ್ ವಾಹನ ಸಿಬ್ಬಂದಿ, ಜಾತ್ರಾ ಸಮಿತಿಯ ಮುಖಂಡರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.

TAGGED:
Share this Article
error: Content is protected !!