ತಾವರಗೇರಾ: ಶಾಸಕರು ಪ್ರಾಮಾಣಿಕವಾಗಿ ಕೆಲಸ ಮಾಡಲಿ,- ದೊಡ್ಡನಗೌಡ ಪಾಟೀಲ್..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅಧಿವೇಶನದಲ್ಲಿ ಕೇವಲ ತೋರಿಕೆಗೆ ಮಾತ್ರ ಪ್ರಶ್ನೆಗಳನ್ನ ಕೇಳುವ ಮುಖಾಂತರ ಕ್ಷೇತ್ರದ ಜನರ ಮೆಚ್ಚುಗೆಗೆ ಗಾಗಿ ಮಾತ್ರ ಕೆಲಸ ಮಾಡದೇ ಪ್ರಾಮಾಣಿಕ ವಾಗಿ ಕೆಲಸ ಮಾಡಿ ತೋರಿಸಲಿ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ದೊಡ್ಡನಗೌಡ ಪಾಟೀಲ್ ಸವಾಲು ಹಾಕಿದರು.

ಪಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಆಗಮಿಸಿ‌ದ ಸಂಧರ್ಭದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು. ಕೃಷ್ಣ ಬಿ ಸ್ಕೀಂ ಯೋಜನೆಗಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಯೋಜನೆಗೆ ಹಣ ಬಿಡುಗಡೆ ಗೊಳಸದಿರುವುದು ಎಲ್ಲರಿಗೂ ತಿಳದ ವಿಚಾರ. ಅಧಿವೇಶನದಲ್ಲಿ ತೋರಿಕೆಗಾಗಿ ಪ್ರಶ್ನೆ ‌ಮಾಡದೇ ಕೆಲಸ ಮಾಡಿ ತೋರಿಸಲಿ ಎಂದು ಹೇಳಿದರು.
ರಾಜ್ಯ ಸರ್ಕಾರ ರೈತರ ಬೆಳೆ ಪರಿಹಾರಕ್ಕಾಗಿ 969 ಕೋಟಿ ಮಂಜೂರು ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರವು ರೈತಾರ ಪರವಾಗಿದೆ ಎಂದು ತೋರಿಸಿಕೊಟ್ಟಿದೆ.
ಈ ಸಂದರ್ಭದಲ್ಲಿ ಚಂದ್ರಕಾಂತ ವಡಗೇರಿ , ಶಿವನಗೌಡ ಪೊಲೀಸ್ ಪಾಟೀಲ್, ಮಂಜುನಾಥ ಜೂಲಕುಂಟಿ, ಮಂಜುನಾಥ ರಾಂಪೂರ, ಶಂಕರ್ ಗೌಡ ಪಾಟೀಲ್ ಕುಷ್ಟಗಿ ಸೇರಿದಂತೆ ಮತ್ತೀತರರಿದ್ದರು.

Share this Article
error: Content is protected !!