ತಾವರಗೇರಾ: ನೂತನ ವಿಧಾನ ಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪುರ ಗೆ ಸನ್ಮಾನ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕೊಪ್ಪಳ ರಾಯಚೂರು ಜಿಲ್ಲೆಯ ನೂತನ ವಿಧಾನ ಪರಿಷತ್ ಸದಸ್ಯರಾದ ಶರಣೇಗೌಡ ಪಾಟೀಲ್ ಬಯ್ಯಾಪೂರ ಅವರನ್ನು ಕಿಲಾರಹಟ್ಟಿ, ಸಂಗನಾಳ, ಮೆಣೇಧಾಳ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಪಟ್ಟಣದ ಕಾಂಗ್ರೆಸ್ ಮುಖಂಡರು ಅವರನ್ನು ಸನ್ಮಾನಿಸಿದರು.
ಶರಣೇಗೌಡ ಪಾಟೀಲ್ ಬಯ್ಯಾಪೂರ ಮಾತನಾಡಿ ಎರಡು ಜಿಲ್ಲೆಗಳ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿ ಮತದಾರರು ನೀಡಿದ ಋಣವನ್ನು ತೀರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಡಾ.ಶಾಮೀದ್ ದೋಟಿಹಾಳ, ಬಸನಗೌಡ ಮಾಲಿಪಾಟೀಲ, ನಾರಾಯಣ ಗೌಡ ಮೆದಿಕೇರಿ, ರುದ್ರಗೌಡ ಕುಲಕರ್ಣಿ, ದುರುಗೇಶ ನಾರಿನಾಳ, ಅಮರೇಶ ಗಾಂಜಿ, ವಿರೇಶ ತಾಳಿಕೋಟಿ, ಎಮ್ ಡಿ ಬಾಬು, ಅಮರೇಶ ಕುಂಬಾರ, ಶಾಮಣ್ಷ ಹುನಗುಂದ, ವೀರನಗೌಡ ಪಾಟೀಲ್, ಶಾಮೀದ್ ನಾಡಗೌಡ ಪಟ್ಟಣ ಪಂಚಾಯತಿಗೆ ಅವಿರೋಧವಾಗಿ ಆಯ್ಕೆಯಾದ ಬೇಬಿ ರೇಖಾ ಉಪ್ಪಳ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Share this Article
error: Content is protected !!