ಸೈನ್ಯ ಸೇರುವ ಕನಸು ಕಂಡಿದ್ದ ಹನುಮನಾಳ ಯುವಕ ಸ್ಮಶಾನದ ಪಾಲಾದ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ದೇಶ ಸೇವೆ ಮಾಡಬೇಕೆಂಬ ಮಹದಾಸೆಯಿಂದ ಸೈನ್ಯ ಸೇರಲು ಬಯಸಿದ ತಾಲೂಕಿನ ಹನುಮನಾಳದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ನಡೆದಿದೆ.
ಮೃತ ಯುವಕನನ್ನು ತಾಲೂಕಿನ ಹನುಮನಾಳ ಗ್ರಾಮದ ಸಂಗಮೇಶ ಬಸವರಾಜ ರೋಣದ (19 ) ಎಂದು ಗುರುತಿಸಲಾಗಿದೆ. ನತದೃಷ್ಟ ಯುವಕ ಹಾಗೂ ಇನ್ನು ನಾಲ್ವರು ಬೆಳಗಾವಿ ಜಿಲ್ಲೆಯ ಚೆನ್ನಮ್ಮ ಕಿತ್ತೂರು ಪಟ್ಟಣದ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ಎಂಬ ಖಾಸಗಿ ಸಂಸ್ಥೆಯಿಂದ ರನ್ನಿಂಗ್ ತರಬೇತಿ ಪಡಯುತ್ತಿರುವ ಸಂದರ್ಭದಲ್ಲಿ ಬೆಳಗಿನ ಜಾವ 5 ಗಂಟೆಗೆ ರಸ್ತೆಯ ಮೇಲೆ ಓಡುತ್ತಿದ್ದ ಯುವಕರ ಗುಂಪಿನ ಮೇಲೆ ಕ್ರಷರ್ ವಾಹನ ಡಿಕ್ಕಿಹೊಡೆದ ಪರಿಣಾಮ ಬಸವರಾಜ ಮೃತ ಪಟ್ಟಿದ್ದರೆ, ಮತ್ತೊಬ್ಬ ಯುವಕ ತೀವ್ರ ಗಾಯಗೊಂಡ ಪರಿಣಾಮ ಜೀವನ್ಮರಣದ ನಡುವೆ ಹೊರಾಟ ನಡೆಸುತ್ತಿದ್ದರೆ, ಮೂರು ಜನ ಯುವಕರ ಕಾಲುಗಳಿಗೆ ಪೆಟ್ಟಾಗಿರುವುದು ತಿಳಿದು ಬಂದಿದೆ.

ಸೈನ್ಯ ಸೇರಿ ದೇಶ ಸೇವೆ ಮಾಡಬೇಕು ಅಂದುಕೊಂಡಿದ್ದ 5 ಜನರ ಕನಸು ನುಚ್ಚುನುರಾಗಿರುವುದಂತು ಸತ್ಯ. ಮೃತ ಪಟ್ಟ ಯುವಕನ ಸ್ವಗ್ರಾಮವಾದ ಹನುಮಾನಳದಲ್ಲಿ ಸ್ಮಶಾನ ಮೌನ ಆವರಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share this Article
error: Content is protected !!